ಒಡಿಯೂರು ಶ್ರೀ ಪಂಚಮುಖಿ ಸ್ವಸಹಾಯ ಸಂಘ ರಚನೆ

0

ಕೆಯ್ಯೂರು: ಒಡಿಯೂರು ಶ್ರೀ ಗ್ರಾಮ ವಿಕಾಸ  ಸ್ವಸಹಾಯ ಸಂಘ ಪ್ರಯೋಜಿತ ಒಡಿಯೂರು ಶ್ರೀ ಪಂಚಮುಖಿ ಸ್ವಸಹಾಯ ಸಂಘವನ್ನು ಕೆಂದಬಾಡಿ ಸಿ.ಎ ಬ್ಯಾಂಕ್ ನ ಆವರಣದಲ್ಲಿ ಕೆಯ್ಯೂರು, ಕೆದಂಬಾಡಿ ಘಟಕ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಘದ  ನೂತನ ಅಧ್ಯಕ್ಷರಾಗಿ ಪ್ರದೀಪ್ ರೈ ಕಾರ್ಯದರ್ಶಿ ಸೀತಾರಾಮ ಬಿ, ಸದಸ್ಯರಾಗಿ ಕರುಣಾಕರ ರೈ ಕೋರಂಗ, ಸುಭಾಷ್ ರೈ, ಮಿತ್ತೋಡಿ, ಚರಣ್ ರೈ, ಕೊರಗಪ್ಪ ತಿಂಗಳಾಡಿ, ಕೃಷ್ಣ ರೈ ತಿಂಗಳಾಡಿ, ಕೆಯ್ಯೂರು ಕೆದಂಬಾಡಿ ಸೇವಾ ದೀಕ್ಷಿತೆ ಶೃತಿ ರೈ ಸಂಘವನ್ನು ರಚನೆ ಮಾಡಿದರು. ಅರಿಯಡ್ಕ ಸೇವಾ ದೀಕ್ಷಿತೆ ಪ್ರೇಮಲತಾ ಸಂಘದ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here