ಕಡ್ಯದಲ್ಲಿ ರಸ್ತೆಗೆ ಮಣ್ಣು ಹಾಕಿ ಸಂಚಾರಕ್ಕೆ ತೊಂದರೆ ಆರೋಪ-ಸ್ಥಳೀಯರಿಂದ ಮುಂಡೂರು ಗ್ರಾ.ಪಂಗೆ ದೂರು

0

ಪುತ್ತೂರು: ಮುಂಡೂರು ಗ್ರಾಮದ ಕಡ್ಯ-ತೌಡಿಂಜ ಸಂಪರ್ಕ ರಸ್ತೆಯ ಕಡ್ಯ ಎಂಬಲ್ಲಿ ಸ್ಥಳೀಯ ವ್ಯಕ್ತಿಯೋರ್ವರು ರಸ್ತೆಗೆ ಮಣ್ಣು ಹಾಕಿದ್ದು ಇದೀಗ ಮಳೆಯಿಂದಾಗಿ ರಸ್ತೆ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿದೆ ಎಂದು ಆರೋಪಿಸಿ ಮತ್ತು ಸಮಸ್ಯೆ ಬಗೆಹರಿಸಿಕೊಡುವಂತೆ ಆಗ್ರಹಿಸಿ ಕಡ್ಯ ಪರಿಸರದ ನಿವಾಸಿಗಳು ಮುಂಡೂರು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ.

ಸ್ಥಳೀಯ ನಿವಾಸಿ ಕುಶಾಲಪ್ಪ ಗೌಡ ಎಂಬವರು ಗ್ರಾ.ಪಂ ರಸ್ತೆಗೆ ಮಣ್ಣು ಹಾಕಿದ್ದು ಇದರಿಂದ ವಾಹನ ಸಂಚಾರಕ್ಕೆ ಮತ್ತು ಸ್ಥಳೀಯರಿಗೆ ನಡೆದುಕೊಂಡು ಹೋಗುವುದಕ್ಕೂ ಅಯೋಗ್ಯವಾಗಿದೆ. ಹಾಗಾಗಿ ಈ ವಿಚಾರಕ್ಕೆ ಸಂಬಂಧಪಟ್ಟು ಅಧಿಕಾರಿಗಳು ಕೂಡಲೇ ಕ್ರಮ ವಹಿಸಿ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಸ್ಥಳೀಯ ನಿವಾಸಿಗಳಾದ ಪುರುಷೋತ್ತಮ ಕಡ್ಯ, ದಿನೇಶ್ ಗೌಡ ಕಡ್ಯ, ಹರ್ಷಿತ್ ಕಡ್ಯ, ಕೊರಗಪ್ಪ ಗೌಡ ಕಡ್ಯ, ಸುಧೀರ್ ಕಡ್ಯ, ಶಿವಪ್ಪ, ಕರುಣಾಕರ ಮೊದಲಾದವರ ಹೆಸರಿನಲ್ಲಿ ಮುಂಡೂರು ಗ್ರಾ.ಪಂಗೆ ದೂರು ಮತ್ತು ಮನವಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here