ಕೊಕ್ಕಡ: ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ, ಕಲ್ಲುರ್ಟಿ ಅಗೇಲು ಸೇವೆ

0

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಮಾಯಿಲಕೋಟೆ ಸೀಮೆ ದೈವಸ್ಥಾನದಲ್ಲಿ ಸಂಕ್ರಮಣ ಪೂಜೆ ಹಾಗೂ ಕಲ್ಲುರ್ಟಿ ಅಗೇಲು ಸೇವೆ ಜು.16ರಂದು ಬೆಳಿಗ್ಗೆ ನಡೆಯಿತು. ನೂರಾರು ಮಂದಿ ಗ್ರಾಮಸ್ಥರು ಸಂಕ್ರಮಣ ಪೂಜೆಯಲ್ಲಿ ಪಾಲ್ಗೊಂಡು ಅಗೇಲು ಸೇವೆ ಮಾಡಿದರು.


ಪ್ರಥಮ ವರ್ಷದ ನೇಮೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಕಾರ್ಯದರ್ಶಿ ಶಾಂತರಾಮ ನ್ಯೂ ಆರಿಗ, ಟ್ರಸ್ಟ್‌ನ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಉಪಾಧ್ಯಕ್ಷ ಲಿಂಗಪ್ಪ ಪುತ್ಯೆಮಜಲು, ಕಾರ್ಯದರ್ಶಿ ಜಯಪ್ರಕಾಶ್ ಹಾರ, ಕೋಶಾಧಿಕಾರಿ ಸುರೇಶ್ ಪಡಿಪಂಡ, ಸದಸ್ಯರಾದ ಜಯರಾಮ ನ್ಯೂ ಆರಿಗ, ಜಯಾನಂದ ಬಂಟ್ರಿಯಾಲ್, ಕುಸುಮ ಪೊಯ್ಯೊಳೆ, ಗಣೇಶ್ ಹಾರ, ಮೋಹನ ಕೆಂಪಮುದೇಲು, ನಾಗೇಶ್ ಹಾರ, ದಾಮೋದರ ನ್ಯೂ ಆರಿಗ, ಬಾಬು ಪುತ್ಯೆಮಜಲು, ದಾಮೋದರ ಗೌಡ ಮಡ್ಯರಗುಂಡಿ, ಮೋಹನ ಕೆಂಪಮುದೇಲು, ಮುತ್ತಪ್ಪ ಗೌಡ ಡೆಂಜ, ವಾಸುದೇವ ಗೌಡ ಮಂಡೆಕರ, ಜಯಂತಿ ಹಾರ, ಗೌರವ್ ಹೊಸಮಜಲು, ದೈವದ ಪರಿಚಾರಕರಾದ ನೇಮಣ್ಣ ಗೌಡ ಹಾರ, ದಾಮೋದರ ಪೂಜಾರಿ, ಹೊನ್ನಪ್ಪ ಪೊಯ್ಯೊಳೆ, ಸುಂದರ ಗೌಡ, ಆನಂದ ಗೌಡ ಹಾರ, ಶೀನಪ್ಪ ಹಾರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here