ಬೆಳ್ಳಿಪ್ಪಾಡಿಯಲ್ಲಿ‌ ಮಣ್ಣು ಕುಸಿತ: ಮುಖ್ಯ ರಸ್ತೆ ಸಂಪರ್ಕ ಕಡಿತದ ಭೀತಿ

0

ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬಳಿ ರಸ್ತೆಯ ಬದಿ ಮಣ್ಣು ಕುಸಿತಗೊಂಡ ಪರಿಣಾಮ ಬೆಳ್ಳಿಪ್ಪಾಡಿ ಕೊಡಪೊಟ್ಯ ಮುಖ್ಯರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಉಂಟಾಗಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಬದಿ ಮಣ್ಣು ಕುಸಿದು ಬಿದ್ದಿದ್ದು ಸಂಪರ್ಕ ರಸ್ತೆಗೆ ತೊಂದರೆ ಉಂಟಾಗುವಂತಾಗಿದೆ. ಅಲ್ಲದೆ, ಮಣ್ಣು ಕುಸಿತದಿಂದಾಗಿ ಪಕ್ಕದಲ್ಲಿ ಇರುವ ಗೀತಾ ಜಯಪ್ರಕಾಶ್ ಶೆಟ್ಟಿ ಎಂಬವರ ಮನೆ ಕುಸಿಯುವ ಭೀತಿಯಲ್ಲಿದೆ. ಸಂಬಂಧಪಟ್ಟವರು‌ ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾ.ಪಂ.ಅಧ್ಯಕ್ಷ ಕೆ.ರಾಮಚಂದ್ರ ಪೂಜಾರಿ ಶಾಂತಿನಗರ ಮತ್ತು ಮಾಜಿ ಉಪಾಧ್ಯಕ್ಷ ಮೋಹನ ಪಕ್ಕಳ ಕುಂಡಾಪು ಅವರು ಭೇಟಿ ನೀಡಿದ್ದು ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here