ಪರಮಾರ್ಗ: ಸ್ವಸಹಾಯ ಸಂಘ ಉದ್ಘಾಟನೆ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪರಮಾರ್ಗ ಒಕ್ಕೂಟದ ಅಧೀನದಲ್ಲಿ ಹತ್ತು ಜನರ ನೂತನ ನವಶಕ್ತಿ ಸ್ವಸಹಾಯ ಸಂಘವನ್ನು ಪರಮಾರ್ಗ ಕಾರ್ಯಕ್ಷೇತ್ರದ ಅಧ್ಯಕ್ಷ ಬೆಳಿಯಪ್ಪ ಗೌಡ ಕೆದ್ಕಾರ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪರಮಾರ್ಗ ಒಕ್ಕೂಟದ ಮಾಜಿ ಅಧ್ಯಕ್ಷ ಗಣೇಶ್ ಪೂಜಾರಿ ದೋಳ, ಉಪಾಧ್ಯಕ್ಷ ರಮೇಶ್ ಗೌಡ, ನೂತನ ತಂಡದ ಪ್ರಬಂಧಕ ಗಾಯತ್ರಿ,ಸಂಯೋಜಕರಾಗಿ ಕಮಲ, ಕೋಶಾಧಿಕಾರಿಯಾಗಿ ಮೋಹಿನಿ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಮೇಲ್ವಿಚಾರಕ ಪುಷ್ಪಲತಾರವರು ಹೊಸ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು. ಗಣೇಶ್ ಪೂಜಾರಿ ದೋಲ ಸ್ವಾಗತಿಸಿ, ಸೇವಾಪ್ರತಿನಿಧಿ ರೋಹಿಣಿ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here