![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಮೈಸೂರಿನ ಅವಧೂತ ಅರ್ಜುನ್ ಮಹಾರಾಜ್ ಗುರೂಜಿಯವರು ಇತ್ತೀಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಬಳಿಕ ಪ್ರಾಧ್ಯಾಪಕರಾದ ಡಾ.ಸಂತೋಷ್ ಪ್ರಭುರವರ ಕೇಪುಳುವಿನಲ್ಲಿರುವ ಸಿಗಂದೂರು ಮನೆಗೆ ಭೇಟಿ ನೀಡಿ, ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರವಚನ ನೀಡಿದರು. ಡಾ.ಸಂತೋಷ್ ಪ್ರಭು, ಮತ್ತು ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಜಂಟಿಯಾಗಿ ಈ ಕಾರ್ಯಕ್ರಮ ವನ್ನು ಸಂಯೋಜಿಸಿದ್ದರು. ಭೇಟಿಯ ಸವಿ ನೆನಪಿಗಾಗಿ ಸಿಗಂದೂರು ಮನೆಯ ಪರಿಸರದಲ್ಲಿ ರುದ್ರಾಕ್ಷಿ ಗಿಡವನ್ನು ನೆಡಲಾಯಿತು.
![](https://puttur.suddinews.com/wp-content/uploads/2023/07/ec8a8250-fc69-435b-b00b-470f80595358-1.jpg)