ಸುಹಾಸಿನಿ ನಾರಾಯಣ ನಿಧನ

0

ಪುತ್ತೂರು: ಮೂಲತಃ ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ಸಾಲ್ತಾಡಿ ಮನೆಯ ನಿವಾಸಿಯಾಗಿದ್ದು ಇತ್ತೀಚೆಗೆ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ವಾಸವಾಗಿದ್ದ ಸುಹಾಸಿನಿ(38ವ)ರವರು ಅಸೌಖ್ಯದಿಂದ ಜು.26ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಖ್ಯಾತ ಕ್ಯಾನ್ಸರ್ ತಜ್ಞರಾಗಿರುವ 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ನಿವಾಸಿ ಡಾ. ರಘು ಬಿ.ರವರ ಸಹೋದರಿ ರುಕ್ಮಿಣಿಯವರ ಪುತ್ರಿಯಾಗಿರುವ ಸುಹಾಸಿನಿಯವರು ಪತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಎ.ಎಸೈ.ಯಾಗಿರುವ ನಾರಾಯಣ, ಪುತ್ರಿಯರಾದ ಕು. ಸ್ನಿಗ್ಧ ಮತ್ತು ಕು. ಸ್ನಿತಿ, ತಂದೆ ಹುಕ್ರ, ತಾಯಿ ರುಕ್ಮಿಣಿ, ಅತ್ತೆ, ಮಾವ ಮತ್ತು ಸಹೋದರರನ್ನು ಅಗಲಿದ್ದಾರೆ. ಸುಹಾಸಿನಿ ಅವರು ಕೋಡಿಂಬಾಡಿಯ ಶಾಂತಿನಗರ ಸರಕಾರಿ‌ ಪ್ರೌಢಶಾಲೆಯಲ್ಲಿ‌ ಪ್ರೌಢಶಾಲಾ ಶಿಕ್ಷಣ ಪಡೆದಿದ್ದರು.

LEAVE A REPLY

Please enter your comment!
Please enter your name here