‘ಜೆಸಿಐ ವಿಟ್ಲ ಘಟಕಕ್ಕೆ ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ TOP-3 ಪ್ರಶಸ್ತಿಯ ಗರಿ’

0

ಪುತ್ತೂರು: ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ವಿಟ್ಲ ಘಟಕವು ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆಯ ವಿಭಾಗದ ಪ್ರತಿಷ್ಠಿತ ಪ್ರಶಸ್ತಿ TOP-3 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.


ಜೆಸಿ ಪರಮೇಶ್ವರ ಹೆಗಡೆ ನೇತ್ರತ್ವದ ಸುಮಾರು 43 ವರ್ಷಗಳ ಇತಿಹಾಸವುಳ್ಳ ಜೆಸಿಐ ವಿಟ್ಲ ಘಟಕವು ಅಭಿವೃದ್ದಿ ಮತ್ತು ಬೆಳವಣಿಗೆಯಲ್ಲಿ 2023ನೇ ಸಾಲಿನಲ್ಲಿ ತೋರಿದ ಅಭೂತಪೂರ್ವ ಸಾಧನೆಗೆ ಈ ಮನ್ನಣೆ ದೊರಕಿತು.ಜೆಸಿಐ ಶಂಕರ ನಾರಾಯಣ ಆಥಿತ್ಯದಲ್ಲಿ ನಡೆದ ”G&D ವೃದ್ಧಿ 2023”ಕಾರ್ಯಕ್ರಮದಲ್ಲಿ ಜೆಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಜೆಸಿ ಪುರುಷೋತ್ತಮ ಶೆಟ್ಟಿ,ಪೂರ್ವ ವಲಯಾಧ್ಯಕ್ಷ ಜೇಸಿ ಉದಯ್ ಕುಮಾರ್ ಶೆಟ್ಟಿ,ನಿಕಟ ಪೂರ್ವ ವಲಯ ಅಧ್ಯಕ್ಷ ಜೇಸಿ ರೋಯನ್ ಉದಯ್ ಕ್ರಾಸ್ತಾ ,ವಲಯ ಉಪಾಧ್ಯಕ್ಷ ಜೆಸಿ ಮಂಜುನಾಥ್ ದೇವಾಡಿಗ ಹಾಗೂ ವಲಯ 15ರ G&D ವಿಭಾಗದ ಸಲಹಾ ಸಮಿತಿ ಅಧ್ಯಕ್ಷರಾದ ಜೆಸಿಐ.ಮರಿಯಪ್ಪ ,ವಲಯ15ರ ಬ್ಯುಸಿನೆಸ್ ವಿಭಾಗದ ನಿರ್ದೇಶಕ ಜೆಸಿ ನಾಗರಾಜ್ ಪೂಜಾರಿ ,ವಲಯ 15ರ ಉಪಾಧ್ಯಕ್ಷರುಗಳು ,ಜೆಸಿಐ ವಿಟ್ಲ ಘಟಕದ ಅಧ್ಯಕ್ಷ ಜೆಸಿ ಪರಮೇಶ್ವರ ಹೆಗಡೆ ,ನಿಕಟ ಪೂರ್ವ ಅಧ್ಯಕ್ಷ ಜೇಸಿ ಚಂದ್ರಹಾಸ ಕೊಪ್ಪಳ ,ಪೂರ್ವಾಧ್ಯಕ್ಷ ಜೆಸಿ ಚಂದ್ರಹಾಸ ಶೆಟ್ಟಿ,ಕಾರ್ಯದರ್ಶಿ ಜೆಸಿ ದೀಕ್ಷಿತ್ ಜಿ, ಜೊತೆ ಕಾರ್ಯದರ್ಶಿ ಜೇಸಿ ರಾಜೀವ್ ಶಿರೂರು,ಉಪಾಧ್ಯಕ್ಷ ಜೆಸಿ ಅಭಿಷೇಕ್, ನಿರ್ದೇಶಕ ಜೇಸಿ ಸಾರಿಕಾ ಸಿ ಶೆಟ್ಟಿ ರವರುಗಳು ಪ್ರಶಸ್ತಿ ವಿತರಣಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here