ಬಿಲ್ಲವ ಸಂಘ ಪುತ್ತೂರು: ಕಡಬ ವಲಯ ಸಂಚಾಲಕರಾಗಿ ಸುಂದರ ಪೂಜಾರಿ ಅಂಗಣ ಆಯ್ಕೆ

0

ಕಡಬ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇಲ್ಲಿ ನಡೆದ ಮಹಾಸಬೆಯಲ್ಲಿ ಕಡಬ ವಲಯದ ಸಂಚಾಲಕರಾಗಿ ಸುಂದರ ಪೂಜಾರಿ ಅಂಗಣಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು ಕಡಬದ ಕದಂಬ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 3 ಗ್ರಾಮಗಳನ್ನು ಒಳಗೊಂಡ ಬಿಲ್ಲವ ಸಂಘದ ಸಂಚಾಲಕರಾಗಿ ಆಯ್ಕೆಯಾಗಿರುತ್ತಾರೆ.


ಗ್ರಾಮ ಸಮಿತಿಯ ಅಧ್ಯಕ್ಷರುಗಳ ಆಯ್ಕೆ:
ಕಡಬ ಕುಟ್ರುಪ್ಪಾಡಿ – ಲಕ್ಷ್ಮಿಶ ಬಂಗೇರ, ಕೋಡಿಂಬಾಳ- ಸುರೇಶ್ ಪಾಲಪ್ಪೆ, ಬಲ್ಯ -ಹರೀಶ್ ಡಿ ಎಚ್.

ಮಹಿಳಾ ಸಮಿತಿ ಅಧ್ಯಕ್ಷರುಗಳು
ಕಡಬ ಕುಟ್ರುಪ್ಪಾಡಿ -ಜಯಂತಿ ನಂದೋಲಿ, ಬಲ್ಯ – ಕೃತಿಕಾ ಸದಾಶಿವ, ಕೋಡಿಂಬಾಳ – ಶ್ವೇತ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here