ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಜನ್ಮದಿನೋತ್ಸವ-ಈಶ್ವರಮಂಗಲ ಶ್ರೀ ಗಜಾನನ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಈಶ್ವರಮಂಗಲ:ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಈಶ್ವರಮಂಗಲ ವಲಯದ ನೆಟ್ಟಣಿಗೆ ಮುಡ್ನೂರು ಕಾರ್ಯಕ್ಷೇತ್ರದ ಈಶ್ವರಮಂಗಲ ಘಟಸಮಿತಿಯ ಸದಸ್ಯರಿಂದ ಶ್ರೀ ಗಜಾನನ ಶಾಲೆಯ ಆವರಣದಲ್ಲಿ ಸ್ವಚ್ಛಾತಾ ಕಾರ್ಯಕ್ರಮ ನಡೆಯಿತು.


ಘಟ ಸಮಿತಿ ಅಧ್ಯಕ್ಷ ತಾರಾನಾಥ ಯನ್ ಜ್ಯೋತಿ ಬೆಳಗಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪರಮ ಪೂಜ್ಯ ಶ್ರೀಗಳವರ ಜನ್ಮ ದಿನೋತ್ಸವದ ಪ್ರಯುಕ್ತ ಪ್ರತಿ ವರ್ಷ ಈ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿರುವುದು ತುಂಬಾ ಸಂತೋಷದ ವಿಚಾರ. ವ್ಯಕ್ತಿ ಹೇಗೆ ಮನಶುದ್ಧಿ ಹಾಗೂ ಶಾರೀರಿಕವಾಗಿ ಶುದ್ಧಿ ಆಗಿರುತ್ತಾನೋ ಹಾಗೆಯೇ ನಮ್ಮ ಪರಿಸರವನ್ನು ಶುದ್ಧಿಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು. ಕಾರ್ಯಕ್ರಮದಲ್ಲಿ ಗ್ರಾಮದ ಸೇವಾಧೀಕ್ಷಿತೆ ಭಾಗಿ, ಪದಾಧಿಕಾರಿಗಳಾದ ಸುಮತಿ ರೈ, ಶಾರದಾ ಹಾಗೂ 64 ಮಂದಿ ಸದಸ್ಯರು ಉಪಸ್ಥಿತರಿದ್ದರು . ಚಂದ್ರಕಲಾ ಸ್ವಾಗತಿಸಿ, ರಮ್ಯ ವಂದಿಸಿದರು.

LEAVE A REPLY

Please enter your comment!
Please enter your name here