ʼಆಟಿದ ಮದಿಪುʼದ ಆಮಂತ್ರಣ ಪತ್ರ ಬಿಡುಗಡೆ

0

ಉಪ್ಪಿನಂಗಡಿ: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಉಬಾರ್ ವಲಯ ಇದರ ನೇತೃತ್ವದಲ್ಲಿ ಆ.6 ರಂದು ಆಯೋಜಿಸಿರುವ ವರ್ಷೋದ ಉಚ್ಛಯ ಬೊಕ್ಕ ಆಟಿದ ಮದಿಪು ಕಾರ್ಯಕ್ರಮದ ಅಮಂತ್ರಣ ಪತ್ರವನ್ನು ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಗುಣಕರ ಅಗ್ನಾಡಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಸುಧಾಕರ ಶೆಟ್ಟಿ, ಲೋಕೇಶ್ ಬೆತ್ತೋಡಿ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಸುನಿಲ್ ಅನಾವು, ಜತೀಂದ್ರ ಶೆಟ್ಟಿ, ಕಿಶೋರ್ ಜೋಗಿ, ಹರೀಶ್ ನಾಯಕ್ ನಟ್ಟಿಬೈಲು, ಜಯರಾಮ ಮಲ್ಲಿಕಾ, ವಿನಯಾ ಆರ್ ರೈ , ಕಮಲಾ, ಪ್ರಜ್ಞಾ, ಜಯಲಕ್ಷ್ಮೀ ಜಯರಾಮ್, ಚಂದ್ರಶೇಖರ ಯಂ, ಜಯಪ್ರಕಾಶ್ ಶೆಟ್ಟಿ, ಯೋಗೀಶ್ ಶೆಣೈ, ರವಿ ಕುಂಟಿನಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಟಿ ತಿಂಗಳ ಪರಂಪರಾಗತ ತಿನಸುಗಳನ್ನು ಹಾಗೂ ತುಳುನಾಡಿನ ಜನಪದೀಯ ವಸ್ತುಗಳನ್ನು, ಹಣ್ಣು ಹಂಪಲುಗಳನ್ನು ಪ್ರದರ್ಶನಗೊಳಿಸಲು ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here