ಪಿಜಕ್ಕಳ: ಶ್ರಮದಾನದ ಮೂಲಕ ರಸ್ತೆ ದುರಸ್ತಿ

0

ಕಡಬ: ಕಡಬ ಗ್ರಾಮದ ಪಿಜಕ್ಕಳದಿಂದ ಗೊಡಾಲ್ ಮೂಲಕ ಕೊಲ್ಲಡ್ಕ, ಕೋಡಿ, ಆರ್ತಿಲ ಉಳಿಪು, ಹೊಸ್ಮಠಕ್ಕೆ ಸಂಪರ್ಕ ಹೊಂದಿರುವ ರಸ್ತೆಯು ಪಿಜಕ್ಕಳದಲ್ಲಿ ತುಂಬಾ ಕೆಟ್ಟು ಹೋಗಿದ್ದು ನಡೆದಾಡಲು, ವಾಹನ ಸಂಚಾರಕ್ಕೆ ಅಯೋಗ್ಯವಾಗಿತ್ತು. ಈ ರಸ್ತೆಯನ್ನು ಊರಿನವರು ಸೇರಿಕೊಂಡು ಶ್ರಮದಾನದ ಮೂಲಕ ದುರಸ್ತಿ ಮಾಡಿ ಸಂಚಾರ ಯೋಗ್ಯವಾಗಿ ಮಾಡಿದರು. ಶ್ರಮದಾನದಲ್ಲಿ ಊರಿನ ಪ್ರಮುಖರಾದ ಅಜಿತ್ ಆಚಾರ್ಯ ಪಿಜಕ್ಕಳ, ಪ್ರಕಾಶ್ ಆಚಾರ್ಯ, ಮೋಕೇಶ್ ಪಿಜಕ್ಕಳ, ಕೇಶವ, ಸವಿತಾ ಆಚಾರ್ಯ, ಅಶೋಕ್ ರೈ ಕೊಲ್ಲಡ್ಕ ,ರಕ್ಷಣ್ ಆಚಾರ್ಯ, ರಿತೇಶ್ ಆಚಾರ್ಯ, ಸತ್ಯ ಕಲ್ಲರ್ಪೆ, ಆನಂದ ಗೌಡ ಕೋಂಕ್ಯಾಡಿ, ದಯಾನಂದ ಗೌಡ ಪೊಯ್ಯತ್ತಡ್ಡ ಮತ್ತಿತರರು ಭಾಗವಹಿಸಿದ್ದರು. ನಿವೃತ್ತ ಶಿಕ್ಷಕ ಪೂವಪ್ಪ ಗೌಡ ಪಿಜಕ್ಕಳ ಸಹಕರಿಸಿದರು.

LEAVE A REPLY

Please enter your comment!
Please enter your name here