ಒಡಿಯೂರು ಶ್ರೀ ಗುರುದೇವಾ ಬಳಗದ ವತಿಯಿಂದ ಆಟಿಕೂಟ

0

ಪುತ್ತೂರು : ಒಡಿಯೂರು ಸ್ವಾಮಿಜಿಯವರ ಹುಟ್ಟು ಹಬ್ಬ ಮತ್ತು ಗ್ರಾಮೋತ್ಸವದ ಪ್ರಯುಕ್ತ ಒಡಿಯೂರು ಶ್ರೀ ಗುರುದೇವ ಸೇವಾಬಳಗ ಪುತ್ತೂರು ಮತ್ತು ಒಡಿಯೂರು ಶ್ರೀ ವಜ್ರಮಾತ ಮಹಿಳಾ ಮಂಡಳಿ ಪುತ್ತೂರು ಘಟಕ ಇವರ ವತಿಯಿಂದ ನೇಹಾ ನಿಲಯದಲ್ಲಿ ಆಟಿಕೂಟ ಕಾರ್ಯಕ್ರಮವನ್ನು ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗುರುದೇವ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೊಂಡ ಮಾತನಾಡಿ , ಕಾರ್ಯಕ್ರಮಕ್ಕೆ ಶುಭ ಕೋರಿದರು. ಆಟಿ ವಿಶೇಷತೆಯ ಬಗ್ಗೆ ಸದಸ್ಯೆ ರೋಹಿಣಿ ರಾಘವ ಆಚಾರ್ಯ ಹಾಗೂ ಚಂದ್ರಕಲಾ ಮಾತನಾಡಿದರು. ಮಹಿಳಾ ಮಂಡಳಿಯ ಎಲ್ಲಾ ಸದಸ್ಯರು ಸೇರಿ 35 ಕ್ಕಿಂತ ಹೆಚ್ಚು ಆಟಿಗೆ ಸಂಬಂಧಿಸಿದ ತಿಂಡಿ ತಿನಿಸುಗಳನ್ನು ತಂದಿದ್ದು ಪ್ರಥಮ ಬಹುಮಾನವನ್ನು ವತ್ಸಲ ನಾಯಕ್, ದ್ವಿತೀಯ ಬಹುಮಾನವನ್ನು ಪಾರ್ವತಿ ಹಾಗೂ ತೃತೀಯ ಬಹುಮಾನವನ್ನು ಸುಚಿತ್ರ ಹಾಗೂ ವಿಶೇಷ ಬಹುಮಾನಗಳನ್ನು ಶಿಕ್ಷಕಿ ಪೂರ್ಣಿಮಾ ಹಾಗೂ ಚಿತ್ರ ಪಡೆದುಕೊಂಡರು.

ಈ ಕಾರ್ಯಕ್ರಮವನ್ನು ವಜ್ರಮಾತದ ಅಧ್ಯಕ್ಷೆ ನಯನ ರೈ ಸ್ವಾಗತಿಸಿ, ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ವಂದಿಸಿದರು. ವತ್ಸಲ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿ ವಜ್ರಮಾತ ಕಾರ್ಯದರ್ಶಿ ಶಾರದಾ ಕೇಶವ್ ಹಾಗೂ ಸದಸ್ಯರಾದ ಸುಮಂಗಲ ಶೆಣೈ ಸಹಕರಿಸಿದರು.ಲತಾ ಅವಿನಾಶ್ ನವ ದಂಪತಿ ಹಾಜರಿದ್ದರು.

ಗುರುದೇವ ಸೇವಾ ಬಳಗ ಮತ್ತು ವಜ್ರಮಾತ ಮಹಿಳಾ ಮಂಡಳಿಯ ಎಲ್ಲಾ ಸದಸ್ಯರುಗಳು, ಪುಟಾಣಿ ಮಕ್ಕಳು ಭಾಗವಹಿಸಿದರು.

LEAVE A REPLY

Please enter your comment!
Please enter your name here