ಗೋಳಿತ್ತೊಟ್ಟು: ಬೈಕ್ ಡಿಕ್ಕಿ-ಬಾಲಕಿಗೆ ಗಾಯ

0

ನೆಲ್ಯಾಡಿ: ಬೈಕ್ ಡಿಕ್ಕಿಯಾಗಿ ಶಾಲಾ ಬಾಲಕಿಯೋರ್ವರು ಗಾಯಗೊಂಡಿರುವ ಘಟನೆ ಜು.29ರಂದು ಸಂಜೆ ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯ ಪೆರಣಕ್ರಾಸ್‌ನಲ್ಲಿ ನಡೆದಿದೆ.
ಗೋಳಿತ್ತೊಟ್ಟು ಗ್ರಾಮದ ಸ್ವಾಮಿಕೃಪಾ ಪೆರಣ ನಿವಾಸಿ ಚಂದ್ರಶೇಖರ ಕೆ.ಎಂ.ರವರ ಪುತ್ರಿ, ನೆಲ್ಯಾಡಿ ಶ್ರೀರಾಮ ಶಾಲೆಯ 1ನೇ ತರಗತಿ ವಿದ್ಯಾರ್ಥಿನಿ ತೃಷಾ(6ವ.)ಗಾಯಗೊಂಡ ಬಾಲಕಿಯಾಗಿದ್ದಾರೆ.

ಈಕೆ ಸಂಜೆ ಶಾಲಾ ಬಸ್ಸಿನಲ್ಲಿ ಬಂದಿದ್ದು ಗೋಳಿತ್ತೊಟ್ಟು-ಕೊಕ್ಕಡ ರಸ್ತೆಯ ಪೆರಣಕ್ರಾಸ್‌ನಲ್ಲಿ ಬಸ್ಸಿನಿಂದ ಇಳಿದು ರಸ್ತೆ ದಾಟಿ ಡಾಮಾರು ಅಂಚಿಗೆ ತಲುಪುತ್ತಿದ್ದಂತೆ ಗೋಳಿತ್ತೊಟ್ಟಿನಿಂದ ಕೊಕ್ಕಡ ಕಡೆಗೆ ರಾಜೇಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೈಕ್(ಕೆಎ 21 ಇಬಿ 9204) ಡಿಕ್ಕಿಯಾಗಿದೆ. ಗಾಯಗೊಂಡಿದ್ದ ತೃಷಾರನ್ನು ಚಿಕಿತ್ಸೆಗಾಗಿ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದು, ಅಲ್ಲಿ ಪ್ರಥಮ ಚಿಕಿತ್ಸೆ ಆದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸವಾರ ರಾಜೇಶ್ ಅಜಾಗರೂಕತೆ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಎಡಬದಿಗೆ ಬೈಕ್ ಚಲಾಯಿಸಿದ ಪರಿಣಾಮ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಚಂದ್ರಶೇಖರ ಶೆಟ್ಟಿಯವರು ನೀಡಿದ ದೂರಿನಂತೆ ಪುತ್ತೂರು ಸಂಚಾರ ಠಾಣೆಯಲ್ಲಿ ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here