ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಬಸ್ ಸಂಚಾರಕ್ಕೆ ಅಡ್ಡಿಯಾಗುವ ವಾಹನಗಳಿಗೆ ದಂಡ !

0

ಪುತ್ತೂರು: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಬಸ್ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ದೂರಿಗೆ ಸಂಬಂಧಿಸಿ ಪುತ್ತೂರು ಸಂಚಾರ ಪೊಲೀಸರು ಪರಿಶೀಲಿಸಿ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ವಾಹನಗಳಿಗೆ ದಂಡ ವಿಧಿಸಿದ್ದಾರೆ.

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಒಂದು ಆಟೋ ರಿಕ್ಷಾಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಉಳಿದಂತೆ ಯಾವ ವಾಹನಗಳಿಗೆ ಸಂಜೆಯ ತನಕ ಪಾರ್ಕ್ ಮಾಡಲು ಅವಕಾಶವಿಲ್ಲ. ಖಾಸಗಿ ವಾಹನದಲ್ಲಿ ಬಂದಿದ್ದರೆ ಅಲ್ಲಿ ತಮ್ಮ ಜನರನ್ನು ಇಳಿಸಿ ತೆರಳಬೇಕು. ಆದರೆ ಬಸ್‌ನಿಲ್ದಾಣದ ಮುಂಭಾಗ ಅನೇಕ ದ್ವಿಚಕ್ರ ವಾಹನಗಳು ಸಂಜೆ ಪಾರ್ಕ್ ಮಾಡಲಾಗುತ್ತಿದ್ದು ಇದು ಇತರ ವಾಹನಗಳಿಗೆ ತುರ್ತು ಪಾರ್ಕ್ ಮಾಡಲು ಅಥವಾ ವಾಹನಗಳಿಂದ ಪ್ರಯಾಣಿಕರನ್ನು ಇಳಿಸಲು ಅಡ್ಡಿಯಾಗುತ್ತಿರುವ ದೂರಿಗೆ ಸಂಬಂಧಿಸಿ ಸಂಚಾರ ಪೊಲೀಸ್ ಠಾಣೆ ಎಸ್.ಐ ಉದಯರವಿ ಅವರ ನೇತೃತ್ವದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಅನೇಕ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here