ಕಡಬ ಮರ್ದಾಳದ ಯುವಕರಿಂದ ರೈಲ್ವೇ ಸಾಮಾಗ್ರಿ ಕಳವು- ಕಡಬ ಪೊಲೀಸರ ವಶಕ್ಕೆ

0

ಕಡಬ:ಮರ್ದಾಳದ ಯುವಕರು ರೈಲ್ವೇ ಹಳಿಯ ಸಾಮಾಗ್ರಿಗಳನ್ನು ಕಳವು ನಡೆಸಿ ಗುಜರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಕಡಬ ಪೊಲೀಸರಿಗೆ ಸಿಕ್ಕಿ ಬಿದ್ದ ಘಟನೆ ಜು.31ರ ರಾತ್ರಿ ನಡೆದಿದೆ.


ಮರ್ದಾಳ ನಿವಾಸಿಗಳಾದ ಅಟೋ ಚಾಲಕ ರಫೀಕ್ ಹಾಗೂ ಸಿದ್ದಿಕ್ ಎಂದು ಗುರುತಿಸಲಾಗಿದೆ. ಇವರು ಪುತ್ತೂರು ಭಾಗದಿಂದ ರೈಲ್ವೆ ಸಾಮಾಗ್ರಿಗಳನ್ನು ಕಳವು ನಡೆಸಿ ತನ್ನ 800 ಕಾರಿನಲ್ಲಿ ತರುತ್ತಿದ್ದ ವೇಳೆ ಗಸ್ತು ನಿರತ ಕಡಬ ಎಸ್.ಐ. ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದುಕೊಂಡು ರೈಲ್ವೇ ಪೋಲಿಸರಿಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ.

LEAVE A REPLY

Please enter your comment!
Please enter your name here