ತೆಂಕಿಲ ವಿವೇಕಾನಂದ ಆ.ಮಾ ಶಾಲೆಯ ವಿದ್ಯಾರ್ಥಿನಿ ನಿಲಿಶ್ಕ ಕೆ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ

0

ಪುತ್ತೂರು: ವಿಜಯ ಕರ್ನಾಟಕ ಕನ್ನಡ ದೈನಿಕ ಮತ್ತು ಕರ್ನಾಟಕ ಸರಕಾರ ಅದೀನ ಸಂಸ್ಥೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಇದರ ಮಂಗಳೂರು ಘಟಕದ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಶೀರ್ಷಿಕೆಯ ಅಡಿಯಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯು ಇತ್ತೀಚೆಗೆ ಮಂಗಳೂರಿನಲ್ಲಿ ನಡೆಯಿತು.

ಈ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ 8ನೇ ತರಗತಿಯಲ್ಲಿ ಓದುತ್ತಿರುವ ಚಿತ್ರಕಲಾ ಪ್ರತಿಭೆ ನಿಲಿಶ್ಕ ಕೆ  ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾಳೆ. ಪ್ರಥಮ ಪ್ರಶಸ್ತಿಯು ರೂ.5000 ನಗದು, ಪ್ರಶಸ್ತಿ ಪತ್ರ,  ಪ್ರಶಸ್ತಿ ಫಲಕ ಹಾಗೂ ಅಂತಿಮ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವರ್ಣ ಚಿತ್ರವನ್ನು ಒಳಗೊಂಡಿರುತ್ತದೆ .ಈಕೆ ನೆಹರು ನಗರ ನಿವಾಸಿ ಇಂಜಿನಿಯರ್ ದಿನೇಶ್ ಕೆ ಹಾಗೂ ಅಧ್ಯಾಪಕಿ ಸ್ಮಿತ ರವರ ಸುಪುತ್ರಿ ಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

LEAVE A REPLY

Please enter your comment!
Please enter your name here