ಪುತ್ತೂರು ದೇವಾಂಗ ಸೇವಾ ಸಮಾಜದಿಂದ ಆಟಿಡೊಂಜಿ ಕೂಟ ಕಾರ್ಯಕ್ರಮ

0

ಪುತ್ತೂರು: ಪುತ್ತೂರಿನ ದೇವಾಂಗ ಸೇವಾ ಸಮಾಜದಿಂದ ಸರಕಾರಿ ನೌಕರರ ಸಭಾಭವನದಲ್ಲಿ ಆಟಿಡೊಂಜಿ ಕೂಟದ ಕಾರ್ಯಕ್ರಮವು ಜು.30ರಂದು ನಡೆಯಿತು.

ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಗುಣ ಎಂ ಶೆಟ್ಟಿ, ಸುರೇಶ್ ಶೆಟ್ಟಿ, ಕುಂಬ್ರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆಟಿ ಮಾಸದ ಪ್ರಾಮುಖ್ಯತೆಯನ್ನು ಎಂ ಎಸ್ ಚೆಟ್ಟಿಯಾರ್ ವಿವರಿಸಿದರು.

ವಿವಿಧ ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಭಕ್ಷ್ಯಗಳು ಕಾರ್ಯಕ್ರಮವನ್ನು ವಿಶೇಷವನ್ನಾಗಿಸಿತು. ನೂತನ ಯುವ ದೇವಾಂಗ ಸಮಿತಿ ರಚನೆಯಾಯಿತು.

ಕಾರ್ಯಕ್ರಮದ ಪ್ರಯೋಜಕತ್ವವನ್ನು ನಂದಕುಮಾರ್ ಬೆಂಗಳೂರು (ಸಭಾಂಗಣದ ವ್ಯವಸ್ಥೆ), ಎಂ ಎಸ್ ಚೆಟ್ಟಿಯಾರ್, ಸತೀಶ್, ಶರತ್ ಚಂದ್ರ, ಪ್ರವೀಣ್ ಕುಮಾರ್, ದೇವಕಿ, ಶಿವಕುಮಾರ್ ವಹಿಸಿದರು.

ಕಾರ್ಯಕ್ರಮವನ್ನು ಆಶ್ರಿತಾ ಪ್ರಾರ್ಥಿಸಿ, ವೈಶಾಲಿ ಹಾಗೂ ಪ್ರಭಾ ನಿರೂಪಿಸಿ, ಕಾರ್ಯದರ್ಶಿ ಶಿಥಿಲ್, ಸುರೇಶ್ ಬಾಚು, ದಿವಾಕರ್ ಶೆಟ್ಟಿ, ಮನೋಹರ್ ಶೆಟ್ಟಿ, ಸುನೀತಾ ರವೀಂದ್ರ, ವಿದ್ಯಾ ಗಿರಿಧರ್, ಸಂದೀಪ್, ಭರತ್, ಸುಮಿತ್ರ ಹಾಗೂ ನರೇಶ್,ಪ್ರಭಾ ಸಹಕರಿಸಿದರು. ಅಧ್ಯಕ್ಷ ದಿವಾಕರ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here