ವಿದ್ಯಾಭಾರತಿ ಕಬಡ್ಡಿ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

0

ವಿದ್ಯಾಭಾರತಿ ಕರ್ನಾಟಕ ಮತ್ತು ಶಕ್ತಿ ವಿದ್ಯಾಸಂಸ್ಥೆ ಶಕ್ತಿನಗರ ಮಂಗಳೂರು ಇವರ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆ ಮಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿಶೋರವರ್ಗದ ಬಾಲಕಿಯರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಕೃತಿಕಾ ಜಿ , ಆದ್ಯ ಬಿ.ಆರ್, ಪಿ ಕವನಶ್ರೀ , ಬಿಂದುಶ್ರೀ, ದೀಕ್ಷಿತಾ, ಲೋಚನ ಯಂ, ಪೂಜಾ, ಮಾನಸ ಎಂ, ಸುಶಾ ಎಂ , ಯಲ್ಲವ್ವ, ತನುಜಾ, ಗೋದಾವರಿ, ನಿಖಿತಾ, ಪ್ರಣಾವ್ಯ ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ಹಾಗೂ ಮನೋಹರ್ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here