ಬೆಳ್ಳಾರೆ ದಾರುಲ್ ಹಿಕ್ಮಾ: ಹಿಮ್ಮತುಸ್ಸುನ್ನ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ದಾರುಲ್ ಹಿಕ್ಮಾ ಎಜುಕೇಶನ್ ಸೆಂಟರ್ ಬೆಳ್ಳಾರೆ ಇದರ ಅಧೀನದಲ್ಲಿರುವ ಹಿಮ್ಮತುಸ್ಸುನ್ನ ದರ್ಸ್& ಹಿಫ್ಝ್ ಇದರ ವಿದ್ಯಾರ್ಥಿ ಒಕ್ಕೂಟಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸ್ಥಳೀಯ ಮುದರ್ರಿಸ್ ಹಾಫಿಝ್ ರಂಶೀದ್ ಸಖಾಫಿ ಪ್ರಾರ್ಥನೆ ನಿರ್ವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದಿರ್ ಔಫಾ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಾಹಿಲ್, ಕೋಶಾಧಿಕಾರಿಯಾಗಿ ಸಲ್ಮಾನ್ ಫಾರಿಸ್ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಅಹ್ಮದ್ ಮುಖ್ತಾರ್, ಮುಹಮ್ಮದ್ ಆದಿಲ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಆದಿಲ್ ಬಿ, ಮುಹಮ್ಮದ್ ಶಮಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಹಮ್ಮದ್ ಜಮಾಲುದ್ದೀನ್, ಮುಹಮ್ಮದ್ ಹಾಶಿರ್‌ರವರನ್ನು ಆಯ್ಕೆ ಮಾಡಲಾಯಿತು. ಮುಹಮ್ಮದ್ ಶಾಹಿಲ್ ಸ್ವಾಗತಿಸಿದರು. ಸಲ್ಮಾನುಲ್ ಫಾರಿಸ್ ವಂದಿಸಿದರು.

LEAVE A REPLY

Please enter your comment!
Please enter your name here