ಕೀರ್ತನ ಸೌಹಾರ್ದ ಸಹಕಾರಿ ಬೊಳ್ವಾರು-ನೂತನ ಸಾಲಿಗೆ ಆಡಳಿತ ಮಂಡಳಿ ರಚನೆ

0

ಪುತ್ತೂರು : 5 ವರುಷಗಳಲ್ಲಿ ,ಮೊದಲ ನಾಲ್ಕಕ್ಕೂ ಅಧಿಕ ವರುಷ ಇಲ್ಲಿನ ಕಲ್ಲಿಮಾರ್ ,ಕೀರ್ತನಾ ಸಂಕೀರ್ಣದಲ್ಲಿ ಕಾರ್ಯನಿರ್ವಾಹಿಸಿ , ಕೆಲ ತಿಂಗಳಿಂದ ಬೊಳ್ವಾರು ಸೂರ್ಯ ಪ್ರಭಾ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ , ಕೀರ್ತನ ಸೌಹಾರ್ದ ಸಹಕಾರಿ ಇದರ ಮುಂದಿನ 5 ವರುಷದ ಅವಧಿಗೆ ಆಡಳಿತ ಮಂಡಳಿಯ 11 ಸ್ಥಾನ ಗಳಿಗೆ ಚುನಾವಣೆಯೂ ಅವಿರೋಧ ಆಯ್ಕೆ ಮೂಲಕ ಆ.2 ರಂದು ಸಹಕಾರಿ ಸಭಾಂಗಣದಲ್ಲಿ ನಡೆದು , ಆ.5 ರಂದು ಅಧ್ಯಕ್ಷ ,ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆರವೇರಿತು.

ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಬೊಳ್ವಾರಿನ ಪ್ರಗತಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಶ್ರೀಪತಿ ರಾವ್ ಹಾಗೂ ಉಪಾಧ್ಯಕ್ಷರಾಗಿ ಪ್ರಸನ್ನ ಕುಮಾರ್ ಕೆ.ಆರ್ ಇವರುಗಳನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ವಸಂತ್ ಕಾಮತ್, ದಿವಾಕರ್ ಬಲ್ಲಾಳ್, ಉದಯಕುಮಾರ್ ಎನ್ ಬಿ , ಮುರಳಿ ಶ್ಯಾಮ್ , ನ್ಯಾಯವಾದಿ ವಿರೂಪಾಕ್ಷ ಭಟ್, ಮಹಿಳಾ ಮೀಸಲಾತಿ ಸ್ಥಾನದಿಂದ ಶ್ರೀಮತಿ ವೀಣಾ ಕುಮಾರಿ ,ಶ್ರೀಮತಿ ದೀಪ ನಾಯಕ್, ಹಿಂದುಳಿದ ಪ್ರವರ್ಗ ‘ಎ ‘ಯಿಂದ ಗೋವಿಂದ ನಾಯಕ್ ಎಸ್.ಎಲ್, ಹಾಗೂ ಪರಿಶಿಷ್ಟ ವರ್ಗದಿಂದ ಶ್ರೀಮತಿ ಯಶೋದಾ.ಟಿ ಆಯ್ಕೆಯಾದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ನವೀನ್ ಕುಮಾರ್ ಎಂ .ಎಸ್ ನಡೆಸಿಕೊಟ್ಟು , ನೂತನ ಸಾಲಿನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಅನ್ನಪೂರ್ಣೆಶ್ವರಿ ಕೆ ಆರ್ , ಸಿಬಂದಿ ಅನಿತಾ ಹೆಗ್ಡೆ ಸಹಕಾರ ನೀಡಿದರು.

LEAVE A REPLY

Please enter your comment!
Please enter your name here