ಪುತ್ತೂರು ಎನ್‌ಎಸ್‌ಯುಐಯಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆ

0

ಪುತ್ತೂರು::ಪುತ್ತೂರು ಎನ್‌ಎಸ್‌ಯುಐಯಿಂದ ಕಾಲೇಜು ವಿದ್ಯಾರ್ಥಿಗಳಿಗೆ ಮೆಹಂದಿ ಸ್ಪರ್ಧೆ ನಡೆಸಲಾಯಿತು.ತಾಲೂಕಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು..
ಮುಖ್ಯ ಅತಿಥಿಗಳಾಗಿ ಶಿವರಾಮ ಆಳ್ವಾ ಭಾಗವಹಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ವಿಜೇತರಿಗೆ ಪ್ರಮಾಣ ಪತ್ರ ವಿತರಿಸಿದರು.


ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಎನ್‌ಎಸ್‌ಯುಐ ನಾಯಕ ಭಾತೀಷ್ ಅಳಕೆಮಜಲು ಮಾತನಾಡಿದರು.ಸ್ಪರ್ಧೆಯ ಪ್ರಥಮ ಸ್ಥಾನವನ್ನು ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಧೀರೇಶ್ ಎಸ್, ದ್ವಿತೀಯ ಸ್ಥಾನವನ್ನು ಕೆಜಿನ್ ಮಹಿಳಾ ಕಾಲೇಜು ವಿದ್ಯಾರ್ಥಿನಿ ರೀನಾಝ್, ತೃತೀಯ ಸ್ಥಾನವನ್ನು ಮುನಾಝ ಬೇಗಂ ಪಡೆದುಕೊಂಡರು.


ಕಾರ್ಯಕ್ರಮದಲ್ಲಿ ಯಂಗ್ ಬ್ರಿಗೇಡ್ ಜಿಲ್ಲಾ ಕಾರ್ಯದರ್ಶಿ ಶರೀಫ್ ಬಲ್ನಾಡು , ಎನ್‌ಎಸ್‌ಯುಐಯ ಮುಖಂಡರಾದ ನೌಶಾದ್ ,ಸೈಫ್ , ಅಸ್ಟನ್ ,ಸುಹೈಲ್ , ನವೀನ್ ,ಇರ್ಫಾನ್ , ತಮ್ಜೀರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here