ಪಾಲ್ತಾಡಿ : ಭಾರಿ ಗಾಳಿಗೆ ಬಿದ್ದ ಬೃಹತ್‌ ಮರ : 40ಕ್ಕೂ ಅಧಿಕ ಅಡಿಕೆಮರಗಳು ನಾಶ

0

ಸವಣೂರು : ಭಾರೀ ಗಾಳಿಗೆ ಬೃಹತ್‌ ಮರವೊಂದು ಅಡಿಕೆ ತೋಟಕ್ಕೆ ಬಿದ್ದ ಪರಿಣಾಮ 40ಕ್ಕೂ ಅಧಿಕ ಅಡಿಕೆ ಮರಗಳು,2 ತೆಂಗಿನ ಮರ ಮುರಿದು ಬಿದ್ದ ಘಟನೆ ಕಡಬ ತಾಲೂಕಿನ ಪಾಲ್ತಾಡಿ ಗ್ರಾಮದಿಂದ ವರದಿಯಾಗಿದೆ. ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಚೆನ್ನಾವರ ಪಟ್ಟೆ ಪಿ.ಎಸ್.ವಿಶ್ವನಾಥ ರೈ ಎಂಬವರಿಗೆ ಸೇರಿದ ತೋಟಕ್ಕೆ ತೋಡಿನ ಪಕ್ಕದಲ್ಲಿದ್ದ ಬೃಹತ್‌ ಹುಣಸೆಮರ ಬಿದ್ದಿದೆ.

ಮರಬಿದ್ದ ಪರಿಣಾಮ 40ಕ್ಕೂ ಅಧಿಕ ಅಡಿಕೆ ಮರಗಳು,2 ತೆಂಗಿನ ಮರಗಳು ನಾಶವಾಗಿದೆ.ಅಲ್ಲದೆ ತೋಟದ ಬದಿಯಲ್ಲಿದ್ದ ಈಚಲು ಮರ ಹಾಗೂ ಇತರ ಮರಗಳೂ ಮುರಿದು ಬಿದ್ದಿದ್ದು,ಅಪಾರ ನಷ್ಟ ಸಂಭವಿಸಿದೆ.ಸ್ಥಳಕ್ಕೆ ಸವಣೂರು ಗ್ರಾ.ಪಂ.ಸದಸ್ಯೆ ವಿನೋದಾ ರೈ ಬೇಟಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಬಾಲಕೃಷ್ಣ ರೈ ,ಸುಶೀಲಾ ರೈ ,ಚಂದ್ರಹಾಸ ರೈ,ಅಚ್ಚುತ ದಾಸ್‌ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here