ಕಾಣಿಯೂರು ಕಾಲೇಜು, ಪ್ರೌಢ ಶಾಲಾ ವಿಭಾಗದ ಸಭಾಂಗಣದ ಮೇಲ್ಛಾವಣಿ ಕುಸಿಯುವ ಭೀತಿಯಲ್ಲಿ..

0

ಶಾಸಕಿ ಭಾಗೀರಥಿ ಮುರುಳ್ಯರವರಿಂದ ಪರಿಶೀಲನೆ

ಕಾಣಿಯೂರು: ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ಸಭಾಂಗಣದ ಮೇಲ್ಚಾವಣಿ ಸಂಪೂರ್ಣ ಹಾನಿಯಾಗಿದ್ದು, ಹಂಚು ಕುಸಿದು ಬೀಳುವ ಹಂತದಲ್ಲಿದೆ. ಅಲ್ಲದೇ ಮಳೆ ನೀರು ಕೂಡ ಸಭಾಂಗಣದೊಳಗೆ ಬೀಳುತ್ತಿದೆ.
ಶಾಸಕರಿಂದ ಪರಿಶೀಲನೆ: ಕುಸಿಯುತ್ತಿರುವ ಕಾಲೇಜಿನ ಸಭಾಂಗಣದ ಮೇಲ್ಚಾವಣಿಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾ. ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಪ್ರೌಢ ಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ, ಕಾಣಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಗ್ರಾ. ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯ ರಾಮಣ್ಣ ಗೌಡ ಮುಗರಂಜ, ಕಾಲೇಜಿನ ಪ್ರಾಂಶುಪಾಲ ಜಯಂತಿ, ಪ್ರೌಢ ಶಾಲಾ ಮುಖ್ಯಗುರು ಉಷಾ ಕಿರಣ ಹಾಗೂ ಮಾಧವ ಗೌಡ ಕಟ್ಟತ್ತಾರು, ಸುಂದರ ಬೆದ್ರಾಜೆ, ದಿನೇಶ್ ಕುಕ್ಕುನಡ್ಕ, ವಸಂತ ದಲಾರಿ, ಶಾಲಾ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.
ಶಾಲಾ ಮೈದಾನ ವೀಕ್ಷಣೆ: ಇದೇ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾಲೇಜಿನ ಮೈದಾನವನ್ನು ವೀಕ್ಷಿಸಿದರು. ಮೈದಾನ ವಿಸ್ತರಣೆ ಮಾಡುವಂತೆ ಕಾಲೇಜು ಹಾಗೂ ಪ್ರೌಢ ಶಾಲಾ ವತಿಯಿಂದ ಮನವಿ ಮಾಡಲಾಯಿತು.

ಅನುದಾನದ ಭರವಸೆ:
ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ಸಭಾಂಗಣದ ಮೇಲ್ಚಾವಣಿಯನ್ನು ದುರಸ್ಥಿಗೊಳಿಸಲು ತುರ್ತಾಗಿ ಅನುದಾನವನ್ನು ಹಾಗೂ ಕಾಲೇಜಿನ ಅಭಿವೃದ್ಧಿಗಾಗಿ ಹಂತ ಹಂತವಾಗಿ ಅನುದಾನ ಒದಗಿಸಲಾಗುವುದು.
ಭಾಗೀರಥಿ ಮುರುಳ್ಯ
ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ

LEAVE A REPLY

Please enter your comment!
Please enter your name here