ಪುಣಚ ತೋರಣಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಆಯ್ಕೆ

0

ಅಧ್ಯಕ್ಷೆಯಾಗಿ: ದಿವ್ಯವಾಣಿ ಕಜೆ-ಉಪಾಧ್ಯಕ್ಷೆಯಾಗಿ: ಪೂರ್ಣಿಮಾ ಮಾಯಿಲಮೂಲೆ-ಕಾರ್ಯದರ್ಶಿಯಾಗಿ : ಅಮಿತ ತೋರಣಕಟ್ಟೆ

ಪುಣಚ : ಪುಣಚ ತೋರಣಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ತೋರಣಕಟ್ಟೆ ಮರಾಟಿ ಸಮಾಜ ಸಭಾಭವನದಲ್ಲಿ ಆ.7ರಂದು ನಡೆಯಿತು.


ಸಂಘದ ನೂತನ ಅಧ್ಯಕ್ಷರಾಗಿ ದಿವ್ಯವಾಣಿ ಮಂಜುನಾಥ ಕಜೆ, ಉಪಾಧ್ಯಕ್ಷರಾಗಿ ಪೂರ್ಣಿಮಾ ಜಗದೀಶ ನಾಯ್ಕ ಮಾಯಿಲಮೂಲೆ, ಕಾರ್ಯದರ್ಶಿಯಾಗಿ ಅಮಿತ ಲೋಕೇಶ್ ನಾಯ್ಕ ತೋರಣಕಟ್ಟೆ, ನಿರ್ದೇಶಕರುಗಳಾಗಿ ಅಶ್ವಿನಿ ಬೇರಿಕೆ, ವೇದಾ ಬೇರಿಕೆ, ಗುಲಾಬಿ ಬಸಿರಿಮೂಲೆ, ಲಾವಣ್ಯ ಕಜೆ, ಕಲಾವತಿ ಅಜೇರು, ವನಿತಾ ಸುಣ್ಣಂಗಳ, ಸಾವಿತ್ರಿ ತೋರಣಕಟ್ಟೆ, ವಾಣಿಶ್ರೀ ಎಂ ಮೊಟ್ಟೆತ್ತಡ್ಕ, ವಾಣಿಶ್ರೀ ಪಂಡಿತಮೂಲೆ, ಅನಿತಾ ಗಿರೀಶ್ ತೋಟದಮೂಲೆ, ಸುಮಿತ್ರ ತೋರಣಕಟ್ಟೆ ಹಾಗೂ ಹಾಲು ಪರಿವೀಕ್ಷಕರಾಗಿ ಪ್ರಮೀಳಾ ಅಜೇರು ಆಯ್ಕೆ ಗೊಂಡರು.


ಪುಣಚ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ದೇವಿಪ್ರಸಾದ್ ಕಲ್ಲಾಜೆ, ಪುಣಚ ಗ್ರಾ. ಪಂ.ಸದಸ್ಯ ಉದಯ ಭಾಸ್ಕರ್ ಅಜೇರು, ತೋರಣಕಟ್ಟೆ ವಿಶ್ವ ಸ್ಟೋರ್‌ನ ಮಾಲಕ ವಿಶ್ವನಾಥ ಭಟ್, ಊರಿನ ಹಿರಿಯರಾದ ರಾಮಣ್ಣ ನಾಯ್ಕ ತೋರಣಕಟ್ಟೆ, ಗಿರೀಶ್ ಭಟ್ ತೋಟದಮೂಲೆ, ರಾಮಚಂದ್ರ ಬೇರಿಕೆ, ವರ್ಣೇಶ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here