ಬನ್ನೂರು: ಮಳೆನೀರು ಸಂರಕ್ಷಣಾ ಅಭಿಯಾನ

0

ಪುತ್ತೂರು: ಚಿಕ್ಕಮುಡ್ನುರು ಕಲಿಯುಗ ಸೇವಾ ಸಮಿತಿ ವತಿಯಿಂದ ನಡೆಸಲ್ಪಡುವ ಮಳೆನೀರು ಸಂರಕ್ಷಣಾ ಅಭಿಯಾನವನ್ನು ಬನ್ನೂರಿನಲ್ಲಿ ನಡೆಸಲಾಯಿತು. ಮಳೆ ನೀರನ್ನು ಕೊಳವೆ ಬಾವಿಗಳಿಗೆ ಹರಿಸಿ ಅಂತರ್ಜಲ ಹೆಚ್ಚಿಸಲು ನಡೆಸಲ್ಪಡುವ ಈ ಯೋಜನೆಗೆ ಬನ್ನೂರು ಗ್ರಾ.ಪಂ. ಸದಸ್ಯರಾದ ಹರಿಣಾಕ್ಷಿ ಮತ್ತು ಸುಪ್ರಿತಾ ಪ್ರಭು ಚಾಲನೆ ನೀಡಿ ಅಂತರ್‌ಜಲಗಳ ಬಳಕೆ ಅತಿಯಾಗಿರುವ ಈ ದಿನಗಳಲ್ಲಿ ಈ ರೀತಿ ಅಂತರ್‌ಜಲ ಹೆಚ್ಚಿಸುವ ಪ್ರಯತ್ನಗಳು ಶ್ಲಾಘನೀಯ. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಬೇಕೆಂದು ವಿನಂತಿಸಿದರು.
ಸಂಸ್ಥೆ ವತಿಯಿಂದ ಈಗಾಗಲೆ ಹಲವು ಕಡೆಗಳಲ್ಲಿ ಈ ರೀತಿ ಮಳೆನೀರು ಸಂರಕ್ಷಣೆಯನ್ನು ಮಾಡಲಾಗಿದೆ. ಮುಂದೆಯು ಇನ್ನಷ್ಟು ಕಡೆಗಳಲ್ಲಿ ಇಂತಹ ಕಾರ್ಯ ಚಟುವಟಿಕೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿ ಸದಸ್ಯ ಪದ್ಮನಾಭ ಪ್ರಭು ಅವರು ತಿಳಿಸಿದರು.
ಈ ಸಂದರ್ಭ ಸ್ಥಳೀಯರಾದ ಹರೀಶ್ ಗೌಡ, ಸಮಿತಿ ಸದಸ್ಯರಾದ ರತ್ನಾಕರ ಪ್ರಭು, ಅಗೇರಿ ಸೆರಾವೋ, ದೇವದಾಸ್, ಸತೀಶ್ ರೈ, ಜಯರಾಮ ಪೂಜಾರಿ, ಸಂಪತ್ ಕುಮಾರ್ ಜೈನ್ ಕಾರ್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here