ಕಲ್ಲಮ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಯಕ್ಷಗಾನ ಸಪ್ತಾಹ – ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದದಿಂದ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ” ಶ್ರೀ ಆಂಜನೇಯ 55″ ಕ್ಕೆ ಪೂರಕವಾಗಿ ಸರ್ವೆ ಕಲ್ಲಮ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಆ.26ರಿಂದ ನಡೆಯುವ ” ಶ್ರೀ ರಾಮಾಯಣ ದರ್ಶನಂ ” ತಾಳಮದ್ದಳೆ ಸಪ್ತಾಹದ ಆಮಂತ್ರಣವನ್ನು ಬಿಡುಗಡೆ ಮಾಡಲಾಯಿತು.


ಶ್ರೀ ಮಠದ ವ್ಯವಸ್ಥಾಪಕ ಡಾ.ಸೀತಾರಾಮ ಭಟ್ ರವರು ಆಮಂತ್ರಣ ಪತ್ರ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು .ಈ ಸಂದರ್ಭ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಕಾಯದರ್ಶಿ ಆನಂದ ಸವಣೂರು, ಅನುರಾಧ ಯಸ್ ಭಟ್, ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ರಾವ್, ಗೌರವ ಕಾರ್ಯದರ್ಶಿ ಟಿ ರಂಗನಾಥ ರಾವ್, ಸಹಕಾರ್ಯದರ್ಶಿ ಅಚ್ಯುತ ಪಾಂಗಣ್ಣಾಯ ಕೋಡಿಬೈಲು, ಅರ್ಚಕರಾದ ಸುಧೀಂದ್ರ ಅಡಿಗ, ನಿರಂಜನ ಭಟ್ ಮೂಡಬಿದ್ರೆ, ಗುಂಪೆ ಕೇಶವ ಭಟ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here