ದರ್ಬೆಯಲ್ಲಿ ಬೈಕ್ ಅಪಘಾತಗೊಂಡ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು : ದರ್ಬೆಯಲ್ಲಿ ಬೈಕ್ ಅಪಘಾತಗೊಂಡು ಗಾಯಗೊಂಡಿದ್ದ ಯುವಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾನವೀಯತೆ ಮೆರೆದಿದ್ದಾರೆ.
ಬೆಳಿಯೂರುಕಟ್ಟೆಯ ರಮೀಝ್ ಎಂಬವರು ಗಾಯಾಳು.

ಅವರು ದರ್ಬೆಯ ಸಂತ ಫಿಲೋಮಿನಾ ಕಾಲೇಜಿನ ಎದುರು ಬೈಕ್ ಅಪಘಾತಗೊಂಡು ಗಾಯಗೊಂಡಿದ್ದರು. ಅದೇ ರಸ್ತೆಯಾಗಿ ತೆರಳುತ್ತಿದ್ದ ಅರುಣ್ ಕುಮಾರ್ ಪುತ್ತಿಲ ತಕ್ಷಣ ತನ್ನ ಕಾರಿನಲ್ಲಿ ಗಾಯಳುವನ್ನು ಕೂರಿಸಿಕೊಂಡು ದರ್ಬೆಯ ಹಿತ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಪಘಾತದಲ್ಲಿ ರಮೀಝ್ ಅವರ ಕಾಲಿಗೆ ಬಲವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here