ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಕರ್ನಾಟಕ ಭೇಟಿ – ಮಂಗಳೂರಿನಲ್ಲಿ ಸ್ವಾಗತಿಸಿದ ಪುತ್ತೂರು ಶಾಸಕರು

0

ಪುತ್ತೂರು: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಸತ್ಯನಾರಾಯಣ ರಾವ್ ಅವರು ಆ.12ರಂದು ಕರ್ನಾಟಕ ವಿವಿಧ ಕಡೆಗಳ ಬೇಟಿಗಾಗಿ ಮಂಗಳೂರಿಗೆ ಬಂದಿದ್ದು, ಅವರನ್ನು ಪುತ್ತೂರು ಶಾಸಕ ಅಶೋಕ್ ರೈ ಸ್ವಾಗತಿಸಿದರು.
ತಿರುಪತಿ ತಿರುಮಲ ದೇವಸ್ಥಾನದ ಉಸ್ತುವಾರಿಯೂ ಆಗಿರುವ ಸತ್ಯನಾರಾಯಣ ರಾವ್ ಅವರು ಶೃಂಗೇರಿ ದೇವಳಕ್ಕೆ ಭೇಟಿ ನೀಡಲು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ರೋಶನ್‌ಪರ್ಲ್ ನಲ್ಲಿ ಅವರನ್ನು ಭೇಟಿಯಾದ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಕರ್ನಾಟಕ ಸರಕಾರದ ಪರವಾಗಿ ಪುತ್ತೂರು ಶಾಸಕ ಅಶೋಕ್ ರೈ ಯವರು ಸತ್ಯನಾರಾಯಣ ರಾವ್ ಅವರನ್ನು ಗೌರವಿಸಿ ಶೃಂಗೇರಿಗೆ ಬೀಳ್ಕೊಟ್ಟರು.

LEAVE A REPLY

Please enter your comment!
Please enter your name here