![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಎಸ್ ಕೆಎಸ್ಸೆಸ್ ಎಫ್ ವಿಖಾಯ ವತಿಯಿಂದ ಸಾರೆಪುಣಿ ಅಂಗನವಾಡಿ ಕೇಂದ್ರದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಮರದ ಗೆಲ್ಲುಗಳನ್ನು ತೆಗೆದು ಒಳ ಭಾಗದಲ್ಲಿ ಮತ್ತು ಹೊರ ಭಾಗದಲ್ಲಿ ಹುಲ್ಲು ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಹಾಗೂ ಸಾರೆಪುಣಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನ್ನು ಸ್ವಚ್ಛಗೊಳಿಸಲಾಯಿತು. ಎಸ್ ಕೆಎಸ್ಸೆಸ್ ಎಫ್ ಸಾರೆಪುಣಿ ಶಾಖಾ ಅಧ್ಯಕ್ಷ ಅಶ್ರಫ್ ಸಾರೆಪುಣಿ, ವಿಖಾಯ ಕಾರ್ಯಕರ್ತರಾದ ಉಸ್ಮಾನ್ ಸಾರೆಪುಣಿ, ಝಕರಿಯ, ಶರಫುದ್ದಿನ್, ಮುಝಮ್ಮಿಲ್, ಉನೈಯ್ಸ್, ಮಿನಾಜ್, ಮುಸ್ತಫಾ, ಮುಬಶ್ಶೀರ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
![](https://puttur.suddinews.com/wp-content/uploads/2023/08/Untitled-1-8.jpg)