ಕೊಳ್ತಿಗೆ ಗ್ರಾ.ಪಂ ನಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾ ಪಂ ಅಧ್ಯಕ್ಷ ಶ್ಯಾಮ ಸುಂದರ ರೈ ಕೆರೆಮೂಲೆ ಧ್ವಜಾರೋಹಣ ನೆರವೇರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಗ್ರಾ ಪಂ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರುಗಳಾದ ಜೆ.ಕೆ ವಸಂತ ಕುಮಾರ್ ರೈ ದುಗ್ಗಳ, ಪವನ್ ಡಿ.ಜಿ, ಪ್ರೇಮಾ,ಲತಾ, ಸುಂದರ, ಶುಭಲತಾ, ಅಕ್ಕಮ್ಮ, ಪ್ರಮೋದ್ ಕೆ.ಎಸ್, ಯಶೋಧಾ ಬಾಬುರಾಜೇಂದ್ರ, ಯಶೋಧಾ ಕೋಡಂಬು, ಬಾಲಕೃಷ್ಣ ಕೆಮ್ಮಾರ, ವೇದಾವತಿ ಕೆಮ್ಮಾರ, ಯತೀಂದ್ರ ಕೊಚ್ಚಿ, ಕೊಳ್ತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಪೂಜಾರಿ ಚಾಲೆಪಡು ಹಾಗೂ ನಿರ್ದೇಶಕರುಗಳು, ಸಿಬ್ಬಂದಿ ವರ್ಗ, ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜೆ.ಕೆ ವಸಂತ ಕುಮಾರ್ ರೈ ದುಗ್ಗಳ ಹಾಗೂ ನಿರ್ದೇಶಕರುಗಳು, ಸಿಬ್ಬಂದಿ ವರ್ಗ, ತಾಪಂ ಮಾಜಿ ಸದಸ್ಯ ಗಂಗಾಧರ ಗೌಡ ಕೆಮ್ಮಾರ, ಎಪಿಎಂಸಿ ಮಾಜಿ ನಿರ್ದೇಶಕ ತೀರ್ಥಾನಂದ ಗೌಡ ದುಗ್ಗಳ, ಷಣ್ಮುಖದೇವ ಪ್ರೌಢ ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ, ಕೊಳ್ತಿಗೆ ರೈತ ಮಿತ್ರಕೂಟ ಅಧ್ಯಕ್ಷ ಮುರಳೀಧರ ಎಸ್.ಪಿ, ಯುವಕ ಮಂಡಲದ ಅಧ್ಯಕ್ಷ ಭರತ್‌ರಾಜ್ ಹಾಗೂ ಪದಾಧಿಕಾರಿಗಳು, ಆದಿಶಕ್ತಿ ಮಹಿಳಾ ಮಂಡಲದ ಅಧ್ಯಕ್ಷ ಮಮತಾ ಹಾಗೂ ಪದಾಧಿಕಾರಿಗಳು, ವರ್ತಕರು, ಸಂಜೀವಿನಿ ಒಕ್ಕೂಟದ ಸದಸ್ಯರುಗಳು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುನೀಲ್ ಎಚ್.ಟಿ, ಗ್ರಾಪಂ ಸಿಬ್ಬಂದಿ ವರ್ಗದವರು,ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಪ್ರಮೋದ್ ಕೆ.ಎಸ್ ಸ್ವಾಗತಿಸಿ, ಗ್ರಾಪಂ ದ್ವಿತೀಯ ದರ್ಜೆ ಲೆಕ್ಕಸಹಾಯಕ ಜಯಪ್ರಸಾದ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಸಂಜೀವಿನಿ ತಂಡದ ಸದಸ್ಯರಿಗೆ ಸಮವಸ್ತ್ರ ವಿತರಣೆ ಹಾಗೂ ಪಂಚಪ್ರಾಣ ಶಪಥ ಪ್ರತಿಜ್ಞಾ ಬೋಧನೆ ನಡೆಯಿತು.

LEAVE A REPLY

Please enter your comment!
Please enter your name here