ನೀರಾಜೆ ನೂರುಲ್ ಹುದಾ ಮದರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಉಪ್ಪಿನಂಗಡಿ: ನೀರಾಜೆ ನೂರುಲ್ ಹುದಾ ಮದರಸದಲ್ಲಿ 77ನೇ ಸ್ವಾತಂತ್ರ್ಯ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಕೊಯಿಲ ನೀರಾಜೆ ನೂರುಲ್ ಹುದಾ ಮದರಸ ಅಧ್ಯಕ್ಷ ನಝಿರ್ ಯನ್ ಕೆ ಧ್ವಜಾರೋಹಣ ನೆರವೇರಿಸಿದರು. ಮದರಸ ಅಧ್ಯಾಪಕ ಬಹುಃ ಯನ್ ಬಿ ದಾರಿಮಿ ದುವಾ ನೆರವೇರಿಸಿದರು. ಮುಖ್ಯ ಅಧ್ಯಾಪಕ ಎಂ ಕೆ ಅಶ್ರಫ್ ಮುಸ್ಲಿಯಾರ್ ಕೋಲ್ಪೆ ಸಂದೇಶ ಭಾಷಣ ಮಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮದರಸದಲ್ಲಿ ನಡೆದ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಇಬ್ರಾಹಿಂ ಮುಸ್ಲಿಯಾರ್ ನೀರಾಜೆ ಮಾಜಿ ಅಧ್ಯಕ್ಷ ಯೂಸುಫ್ ಕೊಯಿಲ ಪತ್ರಕರ್ತ ನಝಿರ್ ಕೊಯಿಲ SKSSF ಅಧ್ಯಕ್ಷ ಇಸ್ಮಾಯಿಲ್ ಪಾಲ್ತಾಡಿ ಕಾರ್ಯದರ್ಶಿ ಶರೀಫ್ ನೀರಾಜೆ ಪುತ್ತುಕುಂಜಿ ಕೋಶಧಿಕಾರಿ ಇಬ್ರಾಹಿಂ ಮೋನು ಯಾಕೂಬ್ ಕೊಯಿಲ ಸಾಜಿ ಕುಂಡಾಜೆ ಇಸ್ಮಾಯಿಲ್ ಸಿ ಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಮದರಸ ವಿದ್ಯಾರ್ಥಿಗಳಾದ ಅಫ್ತಾಲ್ ಹಾಗೂ ಮಿಶಾಲ್ ದೇಶ ಭಕ್ತಿ ಗೀತೆ ಆಲಾಪಿಸಿದರು. ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಧನ್ಯವಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


LEAVE A REPLY

Please enter your comment!
Please enter your name here