ಕೆಮ್ಮಾರ ಸರಕಾರಿ ಶಾಲೆಯಲ್ಲಿ ಶ್ರಮದಾನ, ಸ್ವಚ್ಚತಾ ಕಾರ್ಯಕ್ರಮ

0

ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ಶಾಲಾಭಿವೃದ್ದಿ ಸಮಿತಿ ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.


ಮುಂಜಾನೆಯಿಂದ ರಾತ್ರಿಯವರೆಗೂ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮನಾಭ ಶೆಟ್ಟಿ, ವಾಮನ ಬರಮೇಲು, ಅಝೀಝ್ ಜಿ, ಮುಹಮ್ಮದ್ ಶರೀಫ್ ಮತ್ತು ಹಳೆ ವಿದ್ಯಾರ್ಥಿಗಳಾದ ಕವಿ ಬರಹಗಾರ ಅಬ್ದುಲ್ ಗಫಾರ್ ಕೆಮ್ಮಾರ, ಕಬೀರ್ ವಕೀಲರು ಬಂಟ್ವಾಳ, ಜುನೈದ್ ಗೌರವ ಶಿಕ್ಷಕ ಸೇರಿದಂತೆ ಹಲವರು ಪಾಲ್ಗೊಂಡು ಶಾಲಾ ಸುತ್ತ ಮುತ್ತ ಬೆಳೆದಂತಹ ಗಿಡಗಂಟಿಗಳು, ಶಾಲಾ ಪರಿಸರದಲ್ಲಿ ಹೂದೋಟ ಸ್ವಚ್ಚತಾ ಮತ್ತು ನಿರ್ಮಾಣ, ಅದೇ ರೀತಿ ಹಳೆ ವಿದ್ಯಾರ್ಥಿ ಉದ್ಯಮಿಯೊಬ್ಬರ ಸಹಕಾರದಿಂದ ಶಾಲಾ ಧ್ವಜಸ್ತಂಭ ಹಾಗೂ ಆವರಣ ಗೇಟ್‌ಗೆ ಬಣ್ಣ ಬಳಿಯಲಾಯಿತು. ಶಾಲಾ ಮಕ್ಕಳು ಸ್ವಚ್ಛತೆಗೆ ಸಹಕಾರವನ್ನು ನೀಡಿದರು. ಸ್ವಾತಂತ್ರ್ಯ ದಿನಾಚರಣೆಯ ಪೂರ್ವ ತಯಾರಿಯಾಗಿ ಶಾಲೆಯ ಮೇಲೆ ಅಭಿಮಾನ ಹೊತ್ತು ಸಹಕಾರ ನೀಡಿದ ಹಳೆ ವಿದ್ಯಾರ್ಥಿಗಳಿಗೆ ಮತ್ತು ಶಾಲಾಭಿವೃಧ್ದಿ ಸಮಿತಿ ಸದಸ್ಯರಿಗೆ ಶಾಲಾ ಮುಖ್ಯೊಪಾಧ್ಯಾಯಿನಿ ಶ್ರೀಮತಿ ಜಯಶ್ರೀ ಎಮ್ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ. ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here