ಅಪಘಾತದಲ್ಲಿ ನೆಟ್ಟಾರು ನಿವಾಸಿ ಮೃತ್ಯು: ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ವತಿಯಿಂದ 10 ಲಕ್ಷ ಮೊತ್ತದ ವಿಮೆ

0

ಪುತ್ತೂರು : ಕಳೆದ ನವಂಬರ್ ತಿಂಗಳಲ್ಲಿ ಸುಳ್ಯ ಪೈಚಾರ್ ಬಳಿ ನಡೆದ ಅಪಘಾತವೊಂದರಲ್ಲಿ ಮೃತಪಟ್ಟ ಇಲ್ಲಿನ ನೆಟ್ಟಾರ್ ನಿವಾಸಿ ರೋಹಿತ್ ಕುಟುಂಬ ವರ್ಗಕ್ಕೆ ಹೆಸರಾಂತ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವತಿಯಿಂದ ಅಪಘಾತ ವಿಮೆ ಮೂಲಕ ರೂ.10 ಲಕ್ಷ ಪರಿಹಾರ ಮೊತ್ತ ದೊರೆತಿದೆ.


ಕಲ್ಲಾರೆ ಮಹಾಲಕ್ಷ್ಮೀ ಕಾಂಪ್ಲೆಕ್ಸ್ ಇದರ ಮೊದಲ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಯುನೈಟೆಡ್ ಇಂಡಿಯಾ ಕಂ. ಇದರ ಎಜೆನ್ಸಿ ಸಂಸ್ಥೆ ಶ್ರೀ ಮಾತಾ ಇನ್ಸೂರೆನ್ಸ್ ಸರ್ವಿಸ್ ಇಲ್ಲಿ ನೆಟ್ಟಾರ್ ನಿವಾಸಿ ಅಪಘಾತ ವಿಮೆಯನ್ನು ಮಾಡಿಸಿಕೊಂಡಿದ್ದರು. ವಿಮಾ ಮೊತ್ತ ವರುಷಕ್ಕೆ ರೂ.532-00 ಆಗಿತ್ತು. ಆದರೆ ಇದೀಗ ರಸ್ತೆ ಅಪಘಾತ ದಿಂದ ಅವರು ಮರಣ ಹೊಂದಿದ ಕಾರಣ ಅವರಿಗೆ ಸಿಗಬೇಕಾದ ವಿಮ ಮೊತ್ತವನ್ನು ಮೃತರ ತಂದೆ ರಾಮಣ್ಣ ಮೂಲ್ಯ ಇವರಿಗೆ ಪುತ್ತೂರಿನ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಛೇರಿಯಲ್ಲಿ ಪರಿಹಾರ ಮೊತ್ತವನ್ನು ಚೆಕ್ ಮುಖಾಂತರ ಆ.14 ರಂದು ನೀಡಲಾಯಿತು.


ಈ ವೇಳೆ ಕಂಪನಿಯ ರಿಜನಲ್ ಮ್ಯಾನೇಜರ್ ಈಶ್ವರ್ ನಾಯ್ಕ್ ,ಕ್ಲೈಮ್ ವಿಭಾಗದ ಅಧಿಕಾರಿ ಸುಧೀಶ್ ಹಾಗೂ ಶ್ರೀ ಮಾತಾ ಇನ್ಸೂರೆನ್ಸ್ ಏಜೆನ್ಸಿ ಮಾಲಕ ದಾಮೋದರ ಕುಲಾಲ್ ಮತ್ತು ಸಿಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here