ಚೈತನ್ಯ ಮಿತ್ರವೃಂದದಿಂದ ತುಳುವಿನಲ್ಲಿ ಮಾಸಿಕ ಸಭೆ

0

ಪುತ್ತೂರು: ಚೈತನ್ಯ ಮಿತ್ರವೃಂದ ಪಡೀಲ್ ಪುತ್ತೂರು ಇದರ ಆಗಸ್ಟ್ ತಿಂಗಳ ಮಾಸಿಕ ಸಭೆಯು ಆ.13ರಂದು ಸಂಸ್ಥೆಯ ಕಛೇರಿ ಯಲ್ಲಿ ನಡೆಯಿತು. ತುಳುವಿನ ಆಟಿ ತಿಂಗಳ ಪ್ರಯುಕ್ತ ಎಲ್ಲಾ ಕಲಾಪಗಳನ್ನು ತುಳುವಿನಲ್ಲೇ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ತುಳುನಾಡಿನ ಜಾನಪದ ಕ್ರೀಡೆ ಕಂಬಳವನ್ನು ಆಯೋಜಿಸುತ್ತಿರುವ ಹಾಗೂ ಸದನದಲ್ಲಿ ತುಳುವಿನಲ್ಲಿಯೇ ಮಾತನಾಡಿ ಸರ್ಕಾರದ ಗಮನ ಸೆಳೆದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹಾಗೂ ಶಾಸಕ ವೇದವ್ಯಾಸ ಕಾಮತ್‌ರವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪುರಂದರ್ ಪಡೀಲ್‌ರವರು ಅಧ್ಯಕ್ಷತೆ ವಹಿಸಿ, ಆಟಿ ತಿಂಗಳಲ್ಲಿ ನಮ್ಮ ತುಳುನಾಡಿನ ಜನತೆಯ ಕಷ್ಟದ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಕಾರ್ಯದರ್ಶಿ ಗಣೇಶ್ ಬಿ ಸ್ವಾಗತಿಸಿ ಖಜಾಂಚಿ ಮಂಜುನಾಥ್ ಎಮ್ ವಂದಿಸಿದರು. ಎಲ್ಲಾ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here