ಮುಕ್ರಂಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ

0

ಶಾಸಕ ಅಶೋಕ್ ಕುಮಾರ್ ಅಭಿಮಾನಿಗಳಿಂದ ಮಿಕ್ಸಿ ಕೊಡುಗೆ

ಪುತ್ತೂರು: ಮುಕ್ರಂಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವದಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಶ್ರೀಪಾದರವರು ಧ್ವಜಾರೋಹಣ ಮಾಡಿದರು. ಇದೇ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ಸಲಹೆ ಮೇರೆಗೆ ಅವರ ಅಭಿಮಾನಿಗಳು ಮಿಕ್ಸಿಯನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಗುರು ಶಶಿಕಲಾ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮೀ, ಅಂಗನವಾಡಿ ಸಹಾಯಕಿ ಪೂರ್ಣಿಮ, ಸ್ಥಳೀಯ ಕಾಂಗ್ರೆಸ್ ಮುಖಂಡ ರಫೀಕ್ ಮುಕ್ರಂಪಾಡಿ, ಶರೀಫ್ ಮುಕ್ರಂಪಾಡಿ, ಬಾಲವಿಕಾಸ ಸಮಿತಿಯ ಅಧ್ಯಕ್ಷ ದಿವ್ಯ, ಸಂತೋಷ್, ಅಶೋಕ್ ರೈ ಅಭಿಮಾನಿ ಬಳಗದ ಶಶಿಧರ್ ನಾಕ್ ಕೃಷ್ಣನಗರ, ದೇವರಾಜ್ ಸಿಂಹವನ, ಕೇಶವ ಸುವರ್ಣ ಮೇರ್ಲ, ಶಿವಪ್ರಸಾದ್ ಕಾರ್ಪಾಡಿ, ಅಶೋಕ್ ರೈ, ಮಹಿಳಾ ಬ್ರಿಗೇಡ್‌ನ ಅರುಣ, ಲವಿಟಾರವರು ಮಕ್ಕಳು, ಮತ್ತು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here