ನಿಧನ: ಎಮ್ ಪರಮೇಶ್ವರಿ

0

ಪುತ್ತೂರು: ಪರ್ಲಡ್ಕ ನಿವಾಸಿ ಎಮ್.ಪರಮೇಶ್ವರಿ(75ವ)ರವರು ಅಲ್ಪಕಾಲದ ಅಸೌಖ್ಯದಿಂದ ಆ.7ರಂದು ಅವರ ಮಗಳು ಕೃಷ್ಣವೇಣಿ ಎಸ್ ಭಟ್ ಅವರ ಮನೆಯಲ್ಲಿ ನಿಧನರಾದರು.
ಮೂಲತಃ ಕಾಂಞಗಾಡು ಅಜ್ಜೆಕಾನ ಮನೆತನದ ದಿ. ಎ ಶಂಕರ್ ಭಟ್ ಅವರ ಪತ್ನಿ ಪರಮೇಶ್ವರಿ ಭಟ್ ಅವರು ಕಳೆದ ಹಲವು ವರ್ಷಗಳಿಂದ ಅಳಿಯ ಸತ್ಯನಾರಾಯಣ ಭಟ್ ಅವರ ಮನೆಯಲ್ಲಿ ವಾಸ್ತವ್ಯ ಹೊಂದಿದ್ದರು.

ಮೃತರು ಪುತ್ರಿ ಕೃಷ್ಣವೇಣಿ ಎಸ್ ಭಟ್ ಮತ್ತು ಅಳಿಯ ಸತ್ಯನಾರಾಯಣ ಭಟ್, ಮೊಮ್ಮಗ ಬೆಂಗಳೂರಿನ ಕರ್ಣಾಟಕ ಬ್ಯಾಂಕ್ ಉದ್ಯೋಗಿ ಎಸ್ ವಿವೇಕ್ ಭಟ್ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಹಿರಿಯ ಸಾಹಿತಿ ಪ್ರೊ. ವಿ.ಬಿ ಅರ್ತಿಕಜೆ, ಸತ್ಯನಾರಾಯಣ ಕೋಟೆ, ಕೃಷ್ಣ ಭಟ್ ಹಾಗು ಪರಿವಾರ ಸಹಿತ ಸಂಬಂಧಿಕರಾದ ಟಿ ವಿ ಕ್ಲೀನಿಕ್‌ನ ಸತ್ಯಶಂಕರ್ ಭಟ್, ಶ್ರೀಕೃಷ್ಣ ತಿಂಗಳಾಡಿ, ವಿಜಯಕೃಷ್ಣ ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

LEAVE A REPLY

Please enter your comment!
Please enter your name here