ಕರ್ಕುಂಜ ನಿವಾಸಿ ಹರೀಶ್ ಚಿಕಿತ್ಸೆಗಾಗಿ ಸಹಾಯಹಸ್ತ ನೀಡಲು ಮನವಿ

0

ಪುತ್ತೂರು : ಕಳೆದ 25 ವರುಷಗಳಿಂದ ಇಲ್ಲಿನ ತಾಲೂಕು ಕಛೇರಿಯ ರೆಕಾರ್ಡ್ಸ್ ರೂಮ್ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ ಕರ್ಕುಂಜ ನಿವಾಸಿ , ಹರೀಶ್ ಇವರು ಇತ್ತೀಚೆಗೆ ತೀವ್ರ ರೀತಿಯ ಅನಾರೋಗ್ಯ ಕಾರಣದಿಂದಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಐ ಸಿ ಯುನಲ್ಲಿ ದಾಖಲಾಗಿದ್ದಾರೆ.

ಪ್ರಸ್ತುತ ಹರೀಶರವರಿಗೆ ಹೃದಯ , ಕಿಡ್ನಿ ಹಾಗೂ ಶುಗರ್ ಸಮಸ್ಯೆಗಳಿದ್ದು , ವೈದ್ಯರ ಸೂಚನೆ ಪ್ರಕಾರ ಈ ಎಲ್ಲಾ ಚಿಕಿತ್ಸೆ ಗೆ ಸಮಾರು ಐದರಿಂದ ಆರು ಲಕ್ಷ ರೂಪಾಯಿ ವೆಚ್ಚ ತಗುಲಲಿದೆ.ಇದರಿಂದ ಹರೀಶ್ ಕುಟುಂಬವೂ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದೆ.


ಆದರಿಂದ ಸಹೃದಯಿ ಬಂಧುಗಳು ತಮ್ಮ ಕೈಲಾದ ಚಿಕ್ಕ ಪುಟ್ಟ ಧನ ಸಹಾಯ ನೀಡಿ ,ಅವರ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುವಂತೆ ಪತ್ನಿ ಕಳಕಳಿಯಿಂದ ವಿನಂತಿಸಿದ್ದಾರೆ.
ದಾನಿಗಳು ಮೊಬೈಲ್ ಸಂಖ್ಯೆ 9480231212.ಫೋನ್ ಪೇ ಅಥವಾ ಗೂಗಲ್ ಪೇ ಮೂಲಕ ಧನ ಸಹಾಯ ಮಾಡುಬಹುದು.

LEAVE A REPLY

Please enter your comment!
Please enter your name here