ಪುತ್ತೂರು ಧೀಶಕ್ತಿ ಮಹಿಳಾ ಯಕ್ಷ ಬಳಗದಿಂದ ಬಂಟ್ವಾಳದಲ್ಲಿ ತಾಳಮದ್ದಳೆ 

0

ಪುತ್ತೂರು:ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ  ನಡೆಯುತ್ತಿರುವ ಶ್ರಾವಣ ಮಾಸದ ತಾಳಮದ್ದಳೆ  ಕಾರ್ಯಕ್ರಮದಲ್ಲಿ ಪುತ್ತೂರು  ಧೀಶಕ್ತಿ ಮಹಿಳಾ ಯಕ್ಷಬಳಗ, ತೆಂಕಿಲ  ಇವರಿಂದ ಅಜಪುರ ವಿಷ್ಣು ವಿರಚಿತ “ಉತ್ತರನ ಪೌರುಷ”, ತಾಳಮದ್ದಳೆಯು ಆ.19 ರಂದು ನಡೆಯಿತು.

ಹಿಮ್ಮೇಳದಲ್ಲಿ,ಭಾಗವತರಾಗಿ ಪ್ರದೀಪ್ ಕುಮಾರ್ ಗಟ್ಟಿ, ಚೆಂಡೆ- ಮದ್ದಳೆಗಳಲ್ಲಿ ಕುಸುಮಾಕರ,ಮುಡಿಪು,ಸಾತ್ವಿಕ್,ಮುಡಿಪು ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ (ಉತ್ತರ ಕುಮಾರ),ಜಯಲಕ್ಷ್ಮಿ ವಿ ಭಟ್(ಬೃಹನ್ನಳೆ),ಪ್ರೇಮಾ ಕಿಶೋರ್(ಗೋಪಾಲಕ),ಶ್ರೀವಿದ್ಯಾ ಜೆ ರಾವ್(ಉತ್ತರೆ) ಪಾತ್ರಗಳನ್ನು ನಿರ್ವಹಿಸಿದರು.  ನಾಗೇಶ್ ಪೈ, ಬಂಟ್ವಾಳ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here