ಕೆಸರುಗದ್ದೆಯಲ್ಲಿ ತುಳು ಹಾಡಿಗೆ ಕುಣಿದ ಶಾಸಕರು

0

ಪುತ್ತೂರು; ಕೆಸರ್‌ಡ್ ಒಂಜಿ ದಿನ ಕಾರ್ಯಕ್ರಮದಲ್ಲಿ ಕೆಸರು ಗದ್ದೆಗೆ ಇಳಿದ ಶಾಸಕ ಅಶೋಕ್‌ ಕುಮಾರ್‌ ರೈ ಅವರು ಸ್ಟೆಪ್ ಹಾಕುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸವನ್ನು ಮಾಡಿದ್ದಾರೆ. ಕಂಬಳಬೆಟ್ಟು ಸಿದ್ದಿವಿನಾಯಕ ಯುವಕಮಂಡಲದ ವತಿಯಿಂದ ಧರ್ಮನಗರದಲ್ಲಿ ನಡೆದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರು ಅಲ್ಲಿನ ಯುವಕಮಂಡಲದ ಸದಸ್ಯರ ಜೊತೆಗೆ ಗದ್ದೆಗೆ ಇಳಿದು ತುಳು ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಪ್ರತಿ ವರ್ಷ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸಕರು ಪ್ರತಿ ಬಾರಿಯೂ ಗದ್ದೆಗೆ ಇಳಿದು ಸ್ಟೆಪ್ ಹಾಕುತ್ತಾರೆ. ಅದರಂತೆ ಈ ಬಾರಿ ಶಾಸಕರಾಗಿ ಅಲ್ಲಿನ ಕಾಯಕ್ರಮಕ್ಕೆ ತೆರಳಿದ್ದು, ಯುವಕರ ಒತ್ತಾಯಕ್ಕೆ ಮಣಿದ ಶಾಸಕರು ಕೆಸರುಗದ್ದೆಗೆ ಇಳಿದು ಸಕತ್ ಸ್ಟೆಪ್ ಹಾಕುವ ಮೂಲಕ ತುಳು ಜನಪದ ಶೈಲಿಯ ಕ್ರೀಡೆಗೆ ತಮ್ಮ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಿದ್ದಾರೆ. ತದ ನಂತರ ಸಭೆಯನ್ನುದ್ದೇಸಿಸಿ ಮಾತನಾಡಿ ಸಿದ್ದಿವಿನಾಯಕ ಯುವಕ ಮಂಡಲದ ಸಮಾಜ ಮುಖಿ ಸೇವೆಯನ್ನು ಬಲ್ಲವನಾಗಿದ್ದು ಯುವಕಮಂಡಲದ ಕಟ್ಟಡ ನಿರ್ಮಾಣಕ್ಕೆ ಸರಕಾರದಿಂದ ಸಹಾಯ ಹಸ್ತ ನೀಡುವುದಾಗಿ ಭರವಸೆ ನೀಡಿದರು.

LEAVE A REPLY

Please enter your comment!
Please enter your name here