ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದಿಂದ ತಾಳಮದ್ದಲೆ

0

ಪುತ್ತೂರು: ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಲಯದಲ್ಲಿ ಸೋಣ ತಿಂಗಳ ಪ್ರಥಮ ಶನಿವಾರದಂದು ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘದ ವತಿಯಿಂದ ಪಾರ್ಥ ಸಾರಥ್ಯ ಯಕ್ಷಗಾನ ತಾಳಮದ್ದಲೆ ಜರಗಿತು. ಭಾಗವತರಾಗಿ ಲಕ್ಷ್ಮೀನಾರಾಯಣ ಬಟ್ಯಮೂಲೆ, ಶ್ಯಾಮ್‌ಪ್ರಸಾದ್ ಎಂ, ದಾಮೋದರ್ ಎಂ., ಚೆಂಡೆ ಮದ್ದಲೆಯಲ್ಲಿ ರೋಶನ್ ಕಾಟುಕುಕ್ಕೆ, ಮುರಳೀಧರ್ ಭಟ್, ರಾಮಯ್ಯ ರೈ, ಅರ್ಥಧಾರಿಗಳಾಗಿ ನರಸಿಂಹ ಸಿ.ಕೆ., ಪ್ರದೀಪ್ ರೈ, ಚಂದ್ರಶೇಖರ್ ತಲೆಪ್ಪಾಡಿ, ಸುಬ್ಬಣ್ಣ ಗೌಡ ಪಾರ ಜಗನ್ನಾಥ ರೈ ಕಡಮ್ಮಾಜೆ ಭಾಗವಹಿಸಿದರು. ಸುಬ್ಬಣ್ಣ ಗೌಡ ಪಾರ ಪ್ರಾಯೋಜಕತ್ವದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಪಿ.ಗೋಪಾಲಕೃಷ್ಣ ರಾವ್ ಸ್ವಾಗತಿಸಿ ಪ್ರದೀಪ್ ರೈ ವಂದಿಸಿದರು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here