ಸೆ.17ರಂದು ಕಡಬದಲ್ಲಿ “ಬಿರುವೆರ್ನ ಕೆಸರ್ದ ಪರ್ಬ” ಪುತ್ತೂರು ಬಿಲ್ಲವ ಸಂಘಕ್ಕೆ ಆಮಂತ್ರಣ ವಿತರಣೆ

0

ಕಡಬ: ಯುವವಾಹಿನಿ ಕಡಬ ಘಟಕದ ವತಿಯಿಂದ ನಡೆಯುವ ‘ಬಿರುವೆರ್ನ ಕೆಸರ್ದ ಪರ್ಬ” ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಪುತ್ತೂರು ಬಿಲ್ಲವ ಸಂಘಕ್ಕೆ ಕಡಬ ಘಟಕ ವತಿಯಿಂದ ವಿತರಿಸಲಾಯಿತು.
ಪುತ್ತೂರು ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ, ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು , ಕಾರ್ಯದರ್ಶಿ ಚಿದಾನಂದ, ಜೊತೆ ಕಾರ್ಯದರ್ಶಿ ದಯಾನಂದ ಪೂಜಾರಿ ಆಲಂಕಾರು, ಕೋಶಾಧಿಕಾರಿ ಮಹೇಶ್ಚಂದ್ರ ಸಾಲ್ಯಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ಕೋಲಾಡಿ, ಡಾ.ಸದಾನಂದ ಕುಂದರ್ ಬಿಲ್ಲವ ಸಂಘ ವಲಯ ಸಂಚಾಲಕರು ನೆಲ್ಯಾಡಿ ಇವರಿಗೆ ಘಟಕದ ಅಧ್ಯಕ್ಷ ಕೃಷ್ಣಪ್ಪ ಅಮೈ ವಿತರಿಸಿ ಆಮಂತ್ರಿಸಿದರು. ಈ ಸಂದರ್ಭದಲ್ಲಿ ಕಡಬ ಬಿಲ್ಲವ ಸಂಘದ ವಲಯ ಸಂಚಾಲಕ ಸುಂದರ ಪೂಜಾರಿ ಅಂಗಣ, ಘಟಕದ ಪ್ರಚಾರ ನಿರ್ದೇಶಕ ಧನಂಜಯ ಮರ್ದಾಳ, ಘಟಕದ ಗೌರವ ಸಲಹೆಗಾರರು ವಸಂತ ಪೂಜಾರಿ ಬದಿಬಾಗಿಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here