ಆ.26: ಉಪ್ಪಿನಂಗಡಿಯಲ್ಲಿ ಶಿಕ್ಷಕರಿಗೆ ಮೀಫ್ ಶೈಕ್ಷಣಿಕ ಕಾರ್ಯಾಗಾರ

0

ಪುತ್ತೂರು: ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್ ) ಮತ್ತು ಮಂಗಳೂರು ಯೇನೆಪೋಯ ಶಿಕ್ಷಣ ಸಂಸ್ಥೆಯ ನುರಿತ ತರಬೇತುದಾರರ ಸಹಭಾಗಿತ್ವದಲ್ಲಿ ನರ್ಸರಿ (ಎಲ್ ಕೆಜಿ, ಯುಕೆಜಿ )ಶಿಕ್ಷಕರುಗಳಿಗೆ ಏಕ ದಿನ ಶೈಕ್ಷಣಿಕ ಕಾರ್ಯಾಗಾರ ಆಗಸ್ಟ್ 26 ಶನಿವಾರ ಪೂರ್ವಾಹ್ನ 9.30 ರಿಂದ ಸಂಜೆ 4 ಗಂಟೆಯವರೆಗೆ ಉಪ್ಪಿನoಗಡಿ ಇಂಡಿಯನ್ ಸ್ಕೂಲ್ ಸಬಾoಗಾಣದಲ್ಲಿ ಜರಗಲಿದೆ.

ಪುತ್ತೂರು ಗ್ರಾಮಾoತರ ಪೊಲೀಸ್ ವ್ರತ್ತ ನಿರೀಕ್ಷಕ ಬಿ. ಎನ್. ರವಿ ಕಾರ್ಯಾಗಾರ ಉದ್ಘಾಟಿಸಲಿದ್ದು, ಇಂಡಿಯನ್ ಸ್ಕೂಲ್ ಅಧ್ಯಕ್ಷ ಯೂಸುಫ್ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ .ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ನರ್ಸರಿ ಶಿಕ್ಷಕರು ಹೆಸರನ್ನು ಮುಂಚಿತವಾಗಿ 8861028445 ನೋಂದಾಯಿಸತಕ್ಕದ್ದು ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ, ಉಪಾಧ್ಯಕ್ಷ ಮುಸ್ತಫ ಸುಳ್ಯ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here