ಚಂದ್ರಯಾನ -3ರ ಯಶಸ್ಸು- ವಿಜ್ಞಾನಿಗಳ ತಂಡದಲ್ಲಿ ಪುತ್ತೂರಿನ ರಾಧಾಕೃಷ್ಣ ಭಟ್

0

ಪುತ್ತೂರು: ಚಂದ್ರಯಾನ 3ರ ಯಶಸ್ಸು ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ. 23-08-23 ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ ಇಂತಹ ದೊಡ್ಡ ಸಾಧನೆಯ ಹಿಂದೆ ನಮ್ಮ ದೇಶದ ವಿಜ್ಞಾನಿಗಳ , ತಂತ್ರಜ್ಞರ, ಇನ್ನೀತರರ ಧಣಿವರಿಯದ ಶ್ರಮವಿದೆ ಮುಕ್ಕೋಟಿ ಭಾರತೀಯರ ಪ್ರಾರ್ಥನೆಯ ಫಲವಿದೆ.ಆದರೆ ಇದೆಲ್ಲದರ ನಡುವೆ ನಮ್ಮ ಪುತ್ತೂರಿನ, ಇರ್ದೆ ಬೆಟ್ಟಂಪಾಡಿ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿದ್ದು, ಈಗ ಹಿರಿಯ ವಿಜ್ಞಾನಿಯಾಗಿರುವ ರಾಧಾಕೃಷ್ಣ ಭಟ್‌ ಈ ಯಶಸ್ಸಿನ ಹಿಂದಿರುವ ವಿಜ್ಞಾನಿಗಳ ತಂಡದ ಸದಸ್ಯಗಳಲೊಬ್ಬರು ಎನ್ನುವುದು ಸಂತಸದ ವಿಷಯ.

ದೇಶದ ಕೀರ್ತಿಯನ್ನು ಜಗದಗಲಕ್ಕೆ ಬೆಳಗಿದ ವಿಜ್ಞಾನಿಗಳ ತಂಡಕ್ಕೆ ಸಲ್ಲಿಸುವ ಅಭಿನಂದನೆಗಳ ಜೊತೆಗೆ ನಮ್ಮೂರಿನ ವಾಟೆಡ್ಕ ಸುಬ್ರಮಣ್ಯ ಭಟ್ ಅವರ ಪುತ್ರ ರಾಧಾಕೃಷ್ಣ ಭಟ್‌ ಅವರಿಗೆ ಒಂದು ಸಲಾಂ ಹೇಳಲೇಬೇಕು ಮಾತ್ರವಲ್ಲ ಇದರ ಜೊತೆಗೆ ಅವರ ಸಾಧನೆಯ ಹಾದಿಯಲ್ಲಿ ಪರಿಪೂರ್ಣ ಯಶ್ಸಸ್ಸು ಸಿಗಲಿ ಎಂದು ʼಸುದ್ದಿʼ ಹೃದಯ ತುಂಬಿ ಹಾರೈಸುತ್ತದೆ.

LEAVE A REPLY

Please enter your comment!
Please enter your name here