ಬಪ್ಪಳಿಗೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷನ ನಿರ್ಮಾಣ ಹಂತದ ಮನೆ ಅಡಿಪಾಯ ಕಲ್ಲುಗಳನ್ನು ಕಿತ್ತು ಬಿಸಾಕಿದ ದುಷ್ಕರ್ಮಿಗಳು – ದೂರು

0

ಪುತ್ತೂರು: ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷರೊಬ್ಬರ ಬಪ್ಪಳಿಗೆಯಲ್ಲಿ ನಿರ್ಮಾಣ ಹಂತದ ಮನೆಯ ಅಡಿಗಲ್ಲುಗಳನ್ನು ದುಷ್ಕರ್ಮಿಗಳು ಕಿತ್ತು ಬಿಸಾಕಿರುವ ಘಟನೆ ಆ.25ರಂದು ಬೆಳಗ್ಗೆ ಬೆಳಕಿಗೆ ಬಂದಿದ್ದು, ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.


ಆ.24ರ ಸಂಜೆ ಮನೆಯ ಕೆಲಸ ಕಾರ್ಯಗಳ ಬಗ್ಗೆ ಕಾಂಟ್ರ್ಯಾಕ್ಟ್ ಅವರಲ್ಲಿ ಮೋನು ಬಪ್ಪಳಿಗೆ ಅವರು ವಿಚಾರಿಸಲು ಬಂದಿದ್ದರು. ಬೆಳಗ್ಗೆ ಬಂದು ನೋಡುವಾಗ ಮನೆ ನಿರ್ಮಾಣಕ್ಕೆ ಹಾಕಿದ ಅಡಿಪಾಯ ಕಲ್ಲುಗಳನ್ನು ಯಾರೋ ದುಷ್ಕರ್ಮಿಗಳು ಕಿತ್ತು ಬಿಸಾಡಿದ ರೀತಿಯಲ್ಲಿರುವುದು ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

LEAVE A REPLY

Please enter your comment!
Please enter your name here