ಸವಣೂರು ಯುವಕ ಮಂಡಲದಿಂದ ಅಗ್ನಿವೀರ ಭವನ್‌, ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ವಿನೋದ್‌ ರೈ ಅವರಿಗೆ ಸನ್ಮಾನ

0

ಸವಣೂರು: ರಾಜ್ಯ ಪ್ರಶಸ್ತಿ  ಪುರಸ್ಕೃತ ಸವಣೂರು  ಯುವಕ ಮಂಡಲದ  ವತಿಯಿಂದ ಅಗ್ನಿವೀರ ಭವನ್‌ ಕುಮಾರ್‌  ಮತ್ತು ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ  ವಿನೋದ್‌ ರೈ ಅವರಿಗೆ ಸನ್ಮಾನ ಕಾರ್ಯಕ್ರಮ ಯುವಕ ಮಂಡಲದ ಯುವ  ಸಭಾಭವನದಲ್ಲಿ ನಡೆಯಿತು.

ಅಗ್ನಿವೀರನಾಗಿ ಸೇನೆಗೆ ಆಯ್ಕೆಯಾದ ಬೆಳಂದೂರು ಗ್ರಾಮದ ಅಮೈ ನಿರ್ಮಲಾ-ಕೇಶವ ಗೌಡ ರ ಪುತ್ರ ಭವನ್‌ ಕುಮಾರ್‌ ಹಾಗೂ ಮಾತೃಭೂಮಿ ಬೆಳ್ಳಿಹಬ್ಬ ಪ್ರಶಸ್ತಿ ಪುರಸ್ಕೃತ, ಸವಣೂರು ಯುವಕ ಮಂಡಲವನ್ನು ಯಕ್ಷಗಾನ ಸ್ಪರ್ಧೆಯಲ್ಲಿ ಪ್ರತಿನಿಧಿಸುತ್ತಿದ್ದ ಸರ್ವೆ ಗ್ರಾಮದ ವಿನೋದ್‌ ರೈ ಸೊರಕೆ ಅವರನ್ನು  ಯುವಕ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸವಣೂರು ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ  ಅಧ್ಯಕ್ಷ ಶಿವರಾಮ ಗೌಡ ಮೆದು, ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕಿ, ಭವನ್‌ ಕುಮಾರ್‌ ಅವರ ತಾಯಿ ನಿರ್ಮಲ ಕೇಶವ ಗೌಡ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಾರಗದರ್ಶಕ ಗಿರಿಶಂಕರ  ಸುಲಾಯ, ಮಾಜಿ ಅಧ್ಯಕ್ಷ ರಾಕೇಶ್‌ ರೈ ಕೆಡೆಂಜಿ, ದಿನೇಶ್‌ ಮೆದು, ತಾರಾನಾಥ ಕಾಯರ್ಗ,  ದಿವಾಕರ ಬಸ್ತಿ, ತಾರಾನಾಥ್‌ ಸವಣೂರು, ಮಹೇಶ್‌ ಕೆ.ಸವಣೂರು, ಗಂಗಾಧರ ಪೆರಿಯಡ್ಕ, ಸಚಿನ್‌ ಸವಣೂರು , ದಯಾನಂದ ಮೆದು , ಪ್ರಕಾಶ್‌ ಮಾಲೆತ್ತಾರು ,  ಮಾಜಿ ಕಾರ್ಯದರ್ಶಿಗಳಾದ ಸತೀಶ್‌ ಬಲ್ಯಾಯ,  ರಾಜೇಶ್‌ ಇಡ್ಯಾಡಿ ,ಉಪಾಧ್ಯಕ್ಷ ಚೇತನ್‌ ಕುಮಾರ್‌ ಕೋಡಿಬೈಲು ,ಸವಣೂರು ಹಿಂ.ಜಾ.ವೇ.ಅಧ್ಯಕ್ಷ ಶ್ರೀಧರ ಇಡ್ಯಾಡಿ, ಹಿಂ.ಜಾ.ವೇ.ತಾಲೂಕು ಕಾರ್ಯದರ್ಶಿ ಪುಷ್ಪರಾಜ ಆರೇಲ್ತಡಿ, ಯುವಕ ಮಂಡಲದ ಸದಸ್ಯರಾದ ಬಾಬು ದೇವಸ್ಯ, ಹಿತೇಶ್‌ ಮೆದು, ಲೋಕೇಶ್ ಕನ್ಯಾಮಂಗಲ ಮೊದಲಾದವರು ಉಪಸ್ಥಿತರಿದ್ದರು.

ಪ್ರಥಮ್‌ ಕಾಯರ್ಗ ಪ್ರಾರ್ಥಿಸಿ, ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ .ಜಿ ಸ್ವಾಗತಿಸಿ ,ಕಾರ್ಯದರ್ಶಿ ಕೀರ್ತನ್‌ ಕೋಡಿಬೈಲು ವಂದಿಸಿದರು.

LEAVE A REPLY

Please enter your comment!
Please enter your name here