ಕುಂಟ್ರಕಲ: ಮಹಮ್ಮಾಯೀ ಭಜನಾ ಮಂದಿರದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ

0

ವಿಟ್ಲ: ಶ್ರೀ ಮಹಮ್ಮಾಯೀ ಭಜನಾ ಮಂಡಳಿ ನಾಗವನ – ಕುಂಟ್ರಕಲ, ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ಕುಂಟ್ರಕಲ ಇದರ ಆಶ್ರಯದಲ್ಲಿ ಮಹಮ್ಮಾಯೀ ಭಜನಾ ಮಂದಿರ, ನಾಗವನ – ಕುಂಟ್ರಕಲ ಇಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಸಂಪನ್ನಗೊಂಡಿತು. ಈ ಸಂದರ್ಭ ಮಂದಿರದ ನೂತನ ಪಾಕ ಶಾಲೆಯ ಪ್ರವೇಶೋತ್ಸವವು ನಡೆಯಿತು.


ಚಂದ್ರಯಾನ-3 ಯಶಸ್ವಿಯಾಗಿ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವಲ್ಲಿ ಪಾದ ಸ್ಪರ್ಶ (ಲ್ಯಾಂಡಿಂಗ್) ಆದ ಹಿನ್ನೆಲೆ ಭಾರತ ಮಾತೆಗೆ ಆರತಿ ಬೆಳಗುವುದರೊಂದಿಗೆ ಪುಷ್ಪಾರ್ಚನೆಗೈಯ್ಯಲಾಯ್ತು. ಚಂದ್ರಯಾನ-3 ಯಶಸ್ವಿಯಾದ ಹಿ‌ನ್ನೆಲೆಯಲ್ಲಿ ಸಿಹಿ ಹಂಚಲಾಯಿತು. ಶ್ರೀ ವರಮಹಾಲಕ್ಷ್ಮೀ ಪೂಜೆಯ ಮಹಾಮಂಗಳಾರತಿಯ ಬಳಿಕ ಪ್ರಾರ್ಥನೆಯಲ್ಲಿ ಸೌಜನ್ಯಳಿಗೆ ನ್ಯಾಯ ಸಿಗುವಂತೆ ಪ್ರಾರ್ಥಿಸಲಾಯಿತು. ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಿತು‌.

LEAVE A REPLY

Please enter your comment!
Please enter your name here