ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶ್ರೀಗುರು ಎಂಟರ್‌ಪ್ರೈಸಸ್ ಶುಭಾರಂಭ

0

ಪುತ್ತೂರು: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂದೂಸ್ಥಾನ್ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿ ಶ್ರೀಗುರು ಎಂಟರ್‌ಪ್ರೈಸಸ್ ಆ.31ರಂದು ಶುಭಾರಂಭಗೊಂಡಿತು.

ನೆಲ್ಲಿಕಟ್ಟೆ ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಂಸ್ಥೆಯು ಜನರಿಗೆ ಉತ್ತಮ ಸೇವೆ ನೀಡಿ ಲಾಭದಾಯಕವಾಗಿ ಬೆಳೆಯಲಿ. ಸಂಸ್ಥೆಯಿಂದ ಸಮಾಜಕ್ಕೆ ಉಪಯೋಗವಾಗಲಿ ಎಂದು ಹೇಳಿ ಶುಭಹಾರೈಸಿದರು. ಮುಖ್ಯ ಅತಿಥಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್‌ನ ಪುತ್ತೂರು ಶಾಖೆಯ ಸೀನಿಯರ್ ಮೆನೇಜರ್ ಈಶ್ವರ ನಾಯ್ಕ ಮಾತನಾಡಿ ಚಿಕ್ಕದಾಗಿ ಚೊಕ್ಕದಾಗಿ ಸಂಸ್ಥೆಯನ್ನು ಮಾಡಿದ್ದಾರೆ. ಇದು ಮುಂದಕ್ಕೆ ಹೆಮ್ಮರವಾಗಿ ಬೆಳೆಯಲಿ ಇದರ ಸೇವೆ ಎಲ್ಲರಿಗೂ ಸಿಗಲಿ ಎಂದು ಹೇಳಿ ಶುಭಹಾರೈಸಿದರು. ಪಂಜಳ ಕಲ್ಲುಗುಡ್ಡೆಯ ಸುಪ್ರಭಾತ ಸಂಕೀರ್ಣದ ಮಾಲಕ ಹಾಗೂ ಪ್ರಗತಿಪರ ಕೃಷಿಕ ಶಂಕರನಾರಾಯಣ ರಾವ್ ಮಾತನಾಡಿ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದರು. ಮಾಲಕರ ಪತಿ ಪುರಂದರ ನಾಯ್ಕರವರು ಸ್ವಾಗತಿಸಿ ಮಾತನಾಡಿ ನಮ್ಮಲ್ಲಿ ಎಲ್ಲಾ ರೀತಿಯ ಕಾರ್ಡ್‌ಗಳ ಪ್ರಿಂಟ್, ಹಣ ವರ್ಗಾವಣೆ, ವಾಹನಗಳ ಇನ್ಸೂರೆನ್ಸ್ ಸೌಲಭ್ಯ, ಹೆಲ್ತ್ ಇನ್ಸೂರೆನ್ಸ್, ಬಸ್ ಪಾಸ್, ಆನ್‌ಲೈನ್ ಜಾಬ್ ಅಪ್ಲೈ, ಆಧಾರ್ ಕಾರ್ಡ್, ಪಾನ್ ಕಾರ್ಡ್, ರೇಷನ್ ಕಾರ್ಡ್, ಬೈಂಡಿಂಗ್, ಲ್ಯಾಮಿನೇಸನ್, ಫೊಟೊ ಪ್ರಿಂಟ್, ಬಸ್ ಟ್ರೈನ್ ವಿಮಾನ ಟಿಕೆಟ್ ಬುಕ್ಕಿಂಗ್, ಕೊರಿಯರ್ ವ್ಯವಸ್ಥೆ ಲಭ್ಯವಿದೆ ಎಂದು ಹೇಳಿ ಗ್ರಾಹಕರ ಸಹಕಾರ ಕೋರಿದರು. ಮಾಲಕಿ ಹೇಮಲತಾ ಎಸ್. ಸಹಕರಿಸಿದರು.

LEAVE A REPLY

Please enter your comment!
Please enter your name here