ಗೃಹಲಕ್ಷ್ಮೀಗೆ ಚಾಲನೆ: ಕುರಿಯದಲ್ಲಿ ಸಂಭ್ರಮ

0

ಪುತ್ತೂರು: ಕಾಂಗ್ರೆಸ್ ನಿಂದ ನೀಡಲಾದ 5 ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ದೊರೆತಿದ್ದು ಆ ಸಲುವಾಗಿ ಅಗಸ್ಟ್ 31ರಂದು ಅಜಲಾಡಿ ಬಸ್ ನಿಲ್ದಾಣದ ಬಳಿ ಕುರಿಯ ಗ್ರಾಮಸ್ಥರು ಸಂಭ್ರಮಾಚರಣೆ ಮಾಡಿದರು.


ಕುರಿಯ ಎರಡನೇ ವಾರ್ಡಿನ ಬೂತ್ ಅಧ್ಯಕ್ಷ ಆಸಿಫ್ ಎ ಆರ್ ಮತ್ತು ಅಲ್ಪಸಂಖ್ಯಾತ ಕುರಿಯ ವಲಯ ಅಧ್ಯಕ್ಷ ಸವಾದ್ ಕೆ ಇವರ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಪಟಾಕಿ ಸಿಡಿಸಿ ಸೀಹಿತಿಂಡಿಯನ್ನು ನೀಡಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಯಾಕೂಬ್ ಕುರಿಯ, ಉಮೇಶ್ ರೈ, ಅಬ್ದುಲ್ ಕುಂಞಿ (ಪಕ್ರುಂಞ), ಹನೀಫ್ ಪಡ್ಪು, ಅಬ್ದುಲ್ಲಾ ಹಾಜಿ, ಜಯರಾಮ ಶೆಟ್ಟಿ , ಅಬೂಬಕರ್ ಮುಸ್ಲಿಯರ್, ಸರೋಜಿನಿ, ಅಂಗಾರೆ, ಪುಷ್ಪಾವತಿ, ಹನೀಫ್ ಸಾಹೇಬ್, ಕಲಂದರ್ ಮುಸ್ತಫ, ಲೋಕೇಶ್ ನಾಯ್ಕ, ಆಮಿನ, ಶಾಂತಿ, ಜುಬೈದಾ, ಮಮ್ತಾಜ್, ಸಾರಮ್ಮ,ಉಮ್ಮರ್ ಶಾಫಿ, ಹಬೀಬ್ ಮಾಪಲ, ಪೊಡಿಯ, ರಜಾಕ್ ಅಜಲಾಡಿ, ಮುಸ್ತಫ (ಮುನಾಫ್), ಇಮಾಮ್ ಸಾಹೇಬ್, ಶಫೀಕ್ ಅಜಲಾಡಿ, ಎಮ್ ಅಬ್ದುಲ್ಲ, ಕುಂಞಿಬಿ, ಮೊಹಮ್ಮದ್, ಮಜೀದ್, ಕುಂಞಿ ಅಜಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here