ವಿಟ್ಲ ಸ್ವರ ಸಿಂಚನಾ ಸಂಗೀತ ಶಾಲೆಯಿಂದ ಸಂಗೀತೋತ್ಸವ ಮತ್ತು ಪುರಸ್ಕಾರ ಸಮಾರಂಭ-ಪಿಟೀಲು ವಿದ್ವಾನ್ ಪ್ರಭಾಕರ್ ಕುಂಜಾರುರಿಗೆ “ಸ್ವರ ಸಿಂಚನ” ಪುರಸ್ಕಾರ

0

ಪೆರ್ನಾಜೆ :- ಶ್ರೀ ಭಗವತಿ ದೇವಸ್ಥಾನದ ಸಿಂಹಮಾಸದ ವಿಶೇಷ ಪೂಜಾ ಕಾರ್ಯಕ್ರಮದ ಪ್ರಯುಕ್ತ ವಿಟ್ಲ ಸ್ವರ ಸಿಂಚನಾ ಸಂಗೀತ ಶಾಲೆಯ ವತಿಯಿಂದ ಸಂಗೀತೋತ್ಸವ ಮತ್ತು ಪುರಸ್ಕಾರ ಸಮಾರಂಭ ಇತ್ತೀಚೆಗೆ ಶ್ರೀ ಭಗವತಿ ದೇವಸ್ಥಾನದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ದೀಪ ಪ್ರಜ್ವಲನ ಮೂಲಕ ವಿದ್ವಾನ್ ರಾಜೇಶ್ ಕ್ಯಾಲಿಕೆಟ್ ಇವರು ನೆರವೇರಿಸಿ ನಿರಂತರ ಸಾಂಸ್ಕೃತಿಕ ಸವಿಯನ್ನು ಉಣಬಡಿಸಿ ಸಾಂಸ್ಕೃತಿಕ ಸುಗಂಧವನ್ನು ಎಲ್ಲೆಡೆ ಪಸರಿಸಿ ಎಂದು ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪ್ರಭಾಕರ್ ಕುಂಜಾರ್ ಇವರಿಗೆ ಸ್ವರಸಿಂಚನ ಸವಿತಾ ಕೋಡಂದೂರ್ ಮತ್ತು ರಘುರಾಮ ಶಾಸ್ತ್ರಿ ಕೋಡಂದೂರ್, ಸಿಂಚನ ಲಕ್ಷ್ಮಿ ಕೋಡಂದೂರ್ ರವರು ಪೇಟ ತೋಡಿಸಿ ಶಾಲು ಹಾರ ಸ್ಮರಣಿಕೆ ಸನ್ಮಾನ ಪತ್ರಗಳನ್ನು ಸ್ವರ ಸಿಂಚನ ಪುರಸ್ಕಾರ ನೀಡಿ ಗೌರವಿಸಿದರು.

ಸನ್ಮಾನ ಪತ್ರವನ್ನು ಆದರ್ಷಿಣಿ ವಾಚಿಸಿದರು . ವಿಠಲ ಪದವಿಪೂರ್ವ ಕಾಲೇಜ್ ಬಾಲಿಕಾ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದು ಸಾಧನೆ ಮತ್ತು ತಾಳ್ಮೆ ಇದ್ದರೆ ಏನನ್ನು ಸಾಧಿಸಬಹುದು ಎಂದು ಸಂದರ್ಭದಲ್ಲಿ ಹಿತನುಡಿದರು.


ವ್ಯವಸ್ಥಾಪಕರಾದ ಕೇಶವ್ ಆರ್ ವಿ, ಮೃದಂಗ ವಾದಕರಾದ ವಿಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್ ಹಾಗೂ ಮ್ಯಾoಡೋಲಿನ್ ವಾದಕರಾದ ವಿದ್ವಾನ್ ಪ್ರಸನ್ನ ಬಲ್ಲಾಳ್ ಬೆಂಗಳೂರು ,ಉಬರ್ ರಾಜಗೋಪಾಲ್, ಗೋಪಾಲಕೃಷ್ಣ ನಾಯಕ್ ಪಡಿಬಾಗಿಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ಪ್ರಸನ್ನ ಬಳ್ಳಾಲ್ ಶಾಸ್ತ್ರೀಯ ಸಂಗೀತವನ್ನು ನೀಡಿದರು. ತಬಲ ವಾದಕರಾಗಿ ಸುಮನ್ ದೇವಾಡಿಗ ಪುತ್ತೂರು,ರಿದಂ ಪ್ಯಾಡ್ ನಲ್ಲಿ ಸುಹಾಸ್ ಹೆಬ್ಬಾರ್ ಪುತ್ತೂರು ಕಿ ಬೋರ್ಡ್ ನಲ್ಲಿ ಅಮ್ಮೂ ಮಾಸ್ಟರ್ ಕಾಸರಗೋಡು ಸಹಕರಿಸಿದರು. ಪದ್ಮರಾಜ್ ಚಾರ್ವಾಕ ಇವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here